Nagesh Hegde
Publisher - ಭೂಮಿ ಬುಕ್ಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
- Free Shipping Above ₹200
- Cash on Delivery (COD) Available
Pages - 140
Type - Paperback
ತೇಜಸ್ವಿ ಎಂದರೆ ಏನೆಂದುಕೊಂಡಿರಿ? ಸೂಕ್ಷ್ಮ ಗ್ರಹಿಕೆಯ ಸಾಹಿತಿ ಅಷ್ಟೇ ಅಲ್ಲ; ಅವರೊಳಗೊಬ್ಬ ಸಾಮಾಜಿಕ ಚಿಂತಕ ಇದ್ದ; ಛಾಯಾಗ್ರಾಹಕ ಇದ್ದ; ಚಿತ್ರಕಾರನಿದ್ದ, ಚರಿತ್ರಕಾರನಿದ್ದ. ರೈತನಿದ್ದ. ನಿಸರ್ಗವಿಜ್ಞಾನಿ ಇದ್ದ, ಆಧುನಿಕ ಅಲೆಮಾರಿಯಿದ್ದ, ತಂತ್ರಜ್ಞಾನಕ್ಕೆ ತುಡಿಯುವ ಪ್ರಕಾಶಕನಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜೀವಲೋಕದ ನಾಡಿಮಿಡಿತವನ್ನು ಅರಿತಿದ್ದ ಪರಿಸರ ಪ್ರೇಮಿಯಿದ್ದ. ಕನ್ನಡಕ್ಕೆ ದಕ್ಕಿದ ಈ ಬಹುಮುಖ ವ್ಯಕ್ತಿಯ ಎಲ್ಲ ಮುಖಗಳನ್ನು ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಅವರ ಬಿಂಬ ಮಾಸದಂತೆ ಮಸಕಾಗದಂತೆ ನೋಡಿಕೊಳ್ಳಬೇಕಿದೆ.
ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೇ ಅವರ ತುಡಿತಗಳ ವಿವರಣೆ ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೇ ಇದ್ದ, ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ.
ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೇ ಅವರ ತುಡಿತಗಳ ವಿವರಣೆ ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೇ ಇದ್ದ, ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ.