Dr. Manorama. B. N.
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
per
- Free Shipping Above ₹200
- Cash on Delivery (COD) Available
Pages - 136
Type - Paperback
ನಂದಿಕೇಶ್ವರ, ನಂದಿ, ನಂದೀಶ ಇತ್ಯಾದಿ ನಂದಿಯ ಸಂಬಂಧವಾದ ಎಲ್ಲ ನಾಮೋಲ್ಲೇಖಗಳನ್ನೂ ಲೇಖಕ ಜಾಲಾಡಿದ್ದಾರೆ. ನಂದಿಕೇಶ್ವರನ ಕುರಿತಾದ ಕಣ್ಣೊಟ ಕೇವಲ ದರ್ಪಣಕಾರನಿಗಷ್ಟೇ ಸೀಮಿತವಾಗಿ, ಹದ ತಪ್ಪಬಾರದು ಎಂಬ ಉದ್ದೇಶದಿಂದ, ಆ ಹೆಸರಿಗೆ ಸಂಬಂಧಿಸಿದ ಪುರಾಣ, ಇತಿಹಾಸಗಳನ್ನೆಲ್ಲ ಅರಸಿ ಮಾಹಿತಿಯ ಮೂಟೆಯನ್ನೇ ಕಟ್ಟಿಕೊಟ್ಟಿದ್ದಾರೆ. ಶಿವಪುರಾಣಾದಿಗಳಲ್ಲಿ ಇಣುಕುವ ನಂದಿಯೇ ದರ್ಪಣಕಾರ ನಂದಿಕೇಶ್ವರ ఎంబ ಪ್ರಬಲವಾದ ವಾದಪಂಥವೂ ಇದೆಯಾದ್ದರಿಂದ, ಅದರ ಸಾಧುತ್ವ ಸಾಧ್ಯತೆಗಳನ್ನು ಮಥಿಸಿದ್ದಾರೆ.
ನಂದಿಕೇಶ್ವರ ಹಾಗೂ ಆತನ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಕೃತಿಗಳ ಕುರಿತು ಡಾ.ಬಿ.ಎನ್. ಮನೋರಮಾ ಅಪಾರವಾಗಿ ಪರಿಶ್ರಮಿಸಿದ್ದಾರೆ. ಈಗಿನ ಇಂಟರ್ನೆಟ್ ಯುಗದಲ್ಲಿ ಯಾವ ಮಾಹಿತಿಯನ್ನೂ ಕ್ಷಣಾರ್ಧದಲ್ಲಿ ಪಡೆಯಬಹುದೆಂಬುದು ದಿಟವಾದರೂ, ಈ ರೀತಿಯ ಶೋಧಕಾರ್ಯಕ್ಕೆ ಅದಷ್ಟೇ ನೆರವು ಸಾಲುವುದಿಲ್ಲ. ಗ್ರಂಥಗ್ರಂಥಾಂತರಗಳನ್ನು ಎಣ್ಣೆಗಣ್ಣಾಗಿ ಪರಿಶೀಲಿಸಬೇಕು. ತನ್ನದೇ ಆದ ಮತಿನೈಶಿತ್ಯದಿಂದ ಗುಣಾವಗುಣಗಳನ್ನು ಅಳೆಯಬೇಕು. ಒಂದೊಂದು ನಿರ್ಣಯಕ್ಕೆ ಬರುವಾಗಲೂ ಮೈಯೆಲ್ಲ ಕಣ್ಣಾಗಿರಬೇಕು. ಒಟ್ಟಿನಲ್ಲಿ ಬುದ್ಧಿಯ ಬೆವರು ಬಸಿದು ದಣಿಯಬೇಕು. ಲೇಖಕೆ ಸ್ವತಃ ಸಂಶೋಧಕಿ ಆದ್ದರಿಂದ ಶೋಧನದ ಎಲ್ಲ ಶಿಸ್ತನ್ನೂ ನಿಯಮವನ್ನೂ ಅಚ್ಚಚ್ಚು ಅನುಸರಿಸಿದ್ದು ಕೃತಿಯ ಆದ್ಯಂತ ಕಂಡುಬರುತ್ತದೆ.
-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ನಂದಿಕೇಶ್ವರ ಹಾಗೂ ಆತನ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಕೃತಿಗಳ ಕುರಿತು ಡಾ.ಬಿ.ಎನ್. ಮನೋರಮಾ ಅಪಾರವಾಗಿ ಪರಿಶ್ರಮಿಸಿದ್ದಾರೆ. ಈಗಿನ ಇಂಟರ್ನೆಟ್ ಯುಗದಲ್ಲಿ ಯಾವ ಮಾಹಿತಿಯನ್ನೂ ಕ್ಷಣಾರ್ಧದಲ್ಲಿ ಪಡೆಯಬಹುದೆಂಬುದು ದಿಟವಾದರೂ, ಈ ರೀತಿಯ ಶೋಧಕಾರ್ಯಕ್ಕೆ ಅದಷ್ಟೇ ನೆರವು ಸಾಲುವುದಿಲ್ಲ. ಗ್ರಂಥಗ್ರಂಥಾಂತರಗಳನ್ನು ಎಣ್ಣೆಗಣ್ಣಾಗಿ ಪರಿಶೀಲಿಸಬೇಕು. ತನ್ನದೇ ಆದ ಮತಿನೈಶಿತ್ಯದಿಂದ ಗುಣಾವಗುಣಗಳನ್ನು ಅಳೆಯಬೇಕು. ಒಂದೊಂದು ನಿರ್ಣಯಕ್ಕೆ ಬರುವಾಗಲೂ ಮೈಯೆಲ್ಲ ಕಣ್ಣಾಗಿರಬೇಕು. ಒಟ್ಟಿನಲ್ಲಿ ಬುದ್ಧಿಯ ಬೆವರು ಬಸಿದು ದಣಿಯಬೇಕು. ಲೇಖಕೆ ಸ್ವತಃ ಸಂಶೋಧಕಿ ಆದ್ದರಿಂದ ಶೋಧನದ ಎಲ್ಲ ಶಿಸ್ತನ್ನೂ ನಿಯಮವನ್ನೂ ಅಚ್ಚಚ್ಚು ಅನುಸರಿಸಿದ್ದು ಕೃತಿಯ ಆದ್ಯಂತ ಕಂಡುಬರುತ್ತದೆ.
-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ