Dr. Sharanu Hulluru
Publisher - ವೀರಲೋಕ ಬುಕ್ಸ್
Regular price
Rs. 240.00
Regular price
Rs. 240.00
Sale price
Rs. 240.00
Unit price
per
- Free Shipping Above ₹200
- Cash on Delivery (COD) Available
Pages - 128
Type - Paperback
'ಒಬ್ಬ ತಾರೆಯ ಎಂಟ್ರಿ ಮತ್ತು ಎಗ್ಸಿಟ್ ಅದ್ಭುತವಾಗಿರಬೇಕು; ನೆನಪಿನಲ್ಲಿಡುವಂತಿರಬೇಕು' ಎಂದು ಚಿತ್ರರಸಿಕರ ಮನದ ಅನಭಿಷಿಕ್ತ ದೊರೆಯಾಗಿ ಮೆರೆದ ವಿಷ್ಣುವರ್ಧನ್ ಯಾವಾಗಲೂ ಹೇಳುತ್ತಿದ್ದರು. ಆದರೆ, ಅವರ ಜೀವನದಲ್ಲೇ ಅದು ಅರ್ಧಂಬರ್ಧ ರೀತಿಯಲ್ಲಿ ನಡೆದು ಹೋಯಿತು. 'ನಾಗರಹಾವು' ರಾಮಾಚಾರಿಯ ಎಂಟ್ರಿ ಅದ್ಭುತವಾಗಿಯೇ ಇತ್ತು. ನಂತರದ ದಿನಗಳಲ್ಲಿ ಆ ರೋಚಕ ಗೆಲುವೇ ಅವರಿಗೆ ಶಾಪವಾಯಿತು. ಬಂದಿದ್ದ ಆ ಯಶಸ್ಸನ್ನು ಸಂಭ್ರಮಿಸುವುದಕ್ಕೆ ಹಿತಶತ್ರುಗಳು ಬಿಡಲೇ ಇಲ್ಲ.
ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಮರೆಯಲಾಗದ ಎರಡು ನಕ್ಷತ್ರಗಳು. ಉತ್ತಮ ಚಾರಿತ್ರ್ಯ ಹೊಂದಿದ್ದ, ಅತ್ಯಂತ ಸಜ್ಜನ ಸ್ವಭಾವವಿದ್ದ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ, ನಟನೆಯ ಜೊತೆ ಜೊತೆಗೆ ಸಮಾಜದ ಬಗ್ಗೆ ಅತ್ಯಂತ ಪ್ರಾಮಾಣಿಕ ಕಾಳಜಿ ಇಟ್ಟುಕೊಂಡಿದ್ದ ಮಹಿನೀಯರಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಇಂತಹ ಅನೇಕ ಹೋಲಿಕೆ ಗುಣಗಳೇ ವಿಷ್ಣುವರ್ಧನ್ ಅವರನ್ನು ಬೆನ್ನುಬಿದ್ದು ಕಾಡಿದ್ದು ಸುಳ್ಳಲ್ಲ.
ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಮರೆಯಲಾಗದ ಎರಡು ನಕ್ಷತ್ರಗಳು. ಉತ್ತಮ ಚಾರಿತ್ರ್ಯ ಹೊಂದಿದ್ದ, ಅತ್ಯಂತ ಸಜ್ಜನ ಸ್ವಭಾವವಿದ್ದ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ, ನಟನೆಯ ಜೊತೆ ಜೊತೆಗೆ ಸಮಾಜದ ಬಗ್ಗೆ ಅತ್ಯಂತ ಪ್ರಾಮಾಣಿಕ ಕಾಳಜಿ ಇಟ್ಟುಕೊಂಡಿದ್ದ ಮಹಿನೀಯರಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಇಂತಹ ಅನೇಕ ಹೋಲಿಕೆ ಗುಣಗಳೇ ವಿಷ್ಣುವರ್ಧನ್ ಅವರನ್ನು ಬೆನ್ನುಬಿದ್ದು ಕಾಡಿದ್ದು ಸುಳ್ಳಲ್ಲ.