Dr. Santhosha Hanagalla
Publisher - ಸಪ್ನ ಬುಕ್ ಹೌಸ್
- Free Shipping Above ₹200
- Cash on Delivery (COD) Available
Pages -
Type -
ಪ್ರಸ್ತುತ ಕೃತಿಯ ಉದ್ದೇಶ ಕಿತ್ತೂರು ಕರ್ನಾಟಕದ ವಾಡೆಗಳನ್ನು ಪರಿಚಯಿಸುವುದಾದರೂ. ಪೀಠಿಕೆಯಾಗಿ ಉಗಮ, ವಿಸ್ತಾರಗಳನ್ನು ವಿವರಿಸಿ, ನಂತರ ವಾಡೆಗಳ ವಾಸ್ತು ಶಿಲ್ಪ, ಆಡಳಿತ ಸ್ವರೂಪ ಮತ್ತು ವಾಡೆಗಳ ಸಂದೇಶವನ್ನು ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ವಿವರಿಸಿದ್ದಾರೆ. ೧೮ ವಾಡೆಗಳ ಪರಿಚಯವನ್ನು ಆಪ್ತವಾಗಿ ಮನಸೆಳೆಯುವಂತೆ ಮಾಡಿರುವುದು ಮತ್ತು ವಾಡೆಗಳ ಚಿತ್ರ ಮತ್ತು ವಿನ್ಯಾಸಗಳನ್ನು ನೀಡಿದ್ದಾರೆ. ಅನುಬಂಧದಲ್ಲಿ ತಾಲ್ಲೂಕುವಾರು ವಾಡೆಗಳ ವಿವರ ನೀಡಿರುವುದು ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ. ಕೋಟೆ, ವಾಡೆಗಳ ಬಗ್ಗೆ ಆಳವಾದ ಆಧ್ಯಯನ ಮಾಡಿರುವ ಡಾ. ಸಂತೋಷ ಹಾನಗಲ್ಲ ಅವರು ಈ ಕೃತಿಯಲ್ಲಿ ಅವುಗಳನ್ನು ಜನಪ್ರಿಯ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕನ್ನಡ ನಾಡಿನ ಹೆಚ್ಚು ಪರಿಚತವಲ್ಲದ ವಿಶಿಷ್ಟ ಇತಿಹಾಸವನ್ನು (ವಾಡೆಗಳ ಬಗ್ಗೆ) ತಿಳಿಸಿರುವ ಸಂತೋಷ ಅವರಿಗೆ ನಾಡಾಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
--ನಾಡೋಜ ಪ್ರೊ. ಕಮಲಾ ಹಂಪನಾ