Vasanth Shetty
Publisher -
- Free Shipping Above ₹200
- Cash on Delivery (COD) Available
Pages - 188
Type -
ಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ. ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಕನ್ನಡದ ಯುವ ಬರಹಗಾರ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಅಂಕಣ ಮಾಡಿತ್ತು. ಆಯ್ದ ಅಂಕಣ ಬರಹಗಳ ಸಂಕಲನ ಈ ಪುಸ್ತಕ.