Ravi Belagere
Publisher - ಭಾವನಾ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ರಾಜಕೀಯ ಪಲ್ಲಟಗಳ ಬಗ್ಗೆ ಬರೆಯುವಾಗ ರವಿ ಬೆಳಗೆರೆ ವಹಿಸಿರುವ ಎಚ್ಚರ ಗಮನಾರ್ಹವಾದದ್ದು. ಎರಡು ಪಕ್ಷಗಳವರು ಸೇರಿಕೊಂಡು ಒಬ್ಬ ಮುಖ್ಯಮಂತ್ರಿಯನ್ನು ಕೆಡವುವುದು, ತಲಾ ಇಪ್ಪತ್ತು ತಿಂಗಳು ಹಂಚಿಕೊಂಡು ರಾಜ್ಯವಾಳಲು ಹೊರಡುವುದು, ಕಡೆಗೆ ಕುತಂತ್ರ ಮಾಡಿ ತಮ್ಮದೇ ಆದ ಮಿತ್ರ ಪಕ್ಷಕ್ಕೆ ಅಧಿಕಾರ ಸಿಕ್ಕದಂತೆ ಮಾಡುವುದು ಮುಂತಾದವೆಲ್ಲ ನಮ್ಮ ಕಣ್ಣ ಮುಂದೆ ನಡೆದ ಘಟನೆಗಳೇ. ಇವುಗಳನ್ನು ಬರೆಯುವಾಗ ಲೇಖಕ ಆಯ ತಪ್ಪಿದರೆ ಇಡೀ ಕಥನ ಒಂದು ರಾಜಕೀಯ ಪಲ್ಲಟದ ವರದಿಯಷ್ಟೇ ಆಗಿಬಿಡುವ ಅಪಾಯವಿರುತ್ತದೆ. ಆದರೆ ಬೆಳಗೆರೆ ಪತ್ರಿಕೋದ್ಯಮದಲ್ಲಿ ಇದ್ದೂ ತನ್ನ ಕ್ರಿಯಾಶೀಲತೆ ಉಳಿಸಿಕೊಂಡಿರುವ ಜಾಣ. ಹೀಗಾಗಿ ಕಾದಂಬರಿ ಯಶಸ್ವಿಯಾಗಿದೆ.
- ವಿಶ್ವೇಶ್ವರ ಭಟ್
