H. L. Nagegowda
ದೊಡ್ಡಮನೆ
ದೊಡ್ಡಮನೆ
Publisher - ಐಬಿಹೆಚ್ ಪ್ರಕಾಶನ
- Free Shipping Above ₹350
- Cash on Delivery (COD) Available
Pages -
Type -
Couldn't load pickup availability
ಸರ್ಕಾರದ ಕಾರ್ಯಕ್ಷೇತ್ರದಲ್ಲಿ ನುರಿತ ಜಾಣ್ಮೆಯ ಆಡಳಿತಗಾರರೆಂದು ಹೆಸರು ಪಡೆದುಕೊಂಡು, ಸಾಹಿತ್ಯಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಪ್ರಶಂಸಾರ್ಹವಾಗಿ ಕೈಯಾಡಿಸುತ್ತ, ಕನ್ನಡ ಭಂಡಾರವನ್ನು ಬೆಳೆಸುತ್ತಿರುವ ಕೆಲವೇ ಕೆಲವರು ಸಾಹಿತಿಗಳಲ್ಲಿ ಶ್ರೀಮಾನ್ ನಾಗೇಗೌಡರೊಬ್ಬರು.
-ಕುವೆಂಪು
'ಗಿರಿಜನ ಪ್ರಪಂಚ'ದ ಸಂಗ್ರಹಾನುವಾದವನ್ನು ಆಮೂಲಾಗ್ರವಾಗಿ ಓದಿದಾಗ ವಿಷಯ ಮತ್ತು ಭಾಷೆಗಳ ಓಟ ನನ್ನನ್ನು ಮುಗ್ಧನನ್ನಾಗಿ ಮಾಡಿತು. ಮೂಲ ಲೇಖಕರೇ ಕನ್ನಡದಲ್ಲಿ ಬರೆದಷ್ಟು ಓಜಸ್ಸು ಅದರಲ್ಲಿ ಕಂಡುಬರುತ್ತಿದೆ. ಶ್ರೀ ನಾಗೇಗೌಡರ ಬಗ್ಗೆ ಹೇಳಬಹುದಾದ ಮಾತಿದ್ದರೆ ಇದು ನೀವು ಕನ್ನಡಕ್ಕೆ ಅತ್ಯಮೂಲ್ಯವಾದ ಒಂದು ಆತ್ಮಕಥೆಯನ್ನು ಅರ್ಪಿಸಿದ್ದೀರಿ' ಎಂದು.
-ಶಿವರಾಮ ಕಾರಂತ
ಜಾನಪದ ಸಾಹಿತ್ಯದಲ್ಲಿ ಒಂದು ಧುರೀಣತ್ವವನ್ನು ವಹಿಸಿ ಜಾನಪದ ಜೀವನವನ್ನು ಸಾಕ್ಷೀರೂಪವಾಗಿ ನೋಡುವಂಥ ಪ್ರತಿಭಾಂಶವುಳ್ಳ ನಾಗೇಗೌಡರು ಭೈರವಿ ಕೆಂಪೇಗೌಡರೆಂಬ ಖ್ಯಾತ ಸಂಗೀತಗಾರರ ಜೀವನದ ಸರ್ವಸ್ವಾರಸ್ಯವನ್ನು 'ಭೂಮಿಗೆ ಬಂದ ಗಂಧರ್ವ' ಎಂಬ ಶ್ರೇಷ್ಠ ಕಾದಂಬರಿಯಲ್ಲಿ ಒದಗಿಸಿಕೊಟ್ಟು ಕನ್ನಡ ನಾಡಿನ ಮನದಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ್ದಾರೆ.
-ಪ್ರೊ, ವಿನಾಯಕ ಕೃಷ್ಣ ಗೋಕಾಕ
Share

Subscribe to our emails
Subscribe to our mailing list for insider news, product launches, and more.