ಷ.ಶೆಟ್ಟರ್
Publisher: ಅಭಿನವ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಸಾಧುಗೆ ಸಾಧು, ಮಾಧೂರ್ಯನ್ಗೆ ಮಾಧೂರ್ಯಮ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂಬ ಕಪ್ಪೆಅರಭಟ್ಟನ ಕಲ್ಬರಹದ ಮಾತುಗಳನ್ನು ನಾವೆಲ್ಲರೂ ಆಗಾಗ ಕೇಳಿಯೇ ಇರುತ್ತೇವೆ. ಕನ್ನಡ ನಾಡಿನ ಹಿರಿಮೆ, ಗರಿಮೆಗಳನ್ನು ಬಣ್ಣಿಸುವವರು ಈ ಕಲ್ಬರಹದ ಸಾಲುಗಳನ್ನು ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಿದ್ದರೆ ಈ ಕಪ್ಪೆಅರಭಟ್ಟ ಯಾರು? ಶ್ರೀ ಅಕ್ಷರಮೇರು ದಾಮೋದರನೆಂಬ ಕವಿ, ಲಿಪಿಕಾರ ಹಾಗೂ ಶಿಲ್ಪಿಯೇ ಈ ಕಪ್ಪೆಅರಭಟ್ಟನೇ? ಚಾಳುಕ್ಯರ ಕಾಲದ ಕನ್ನಡ ಲಿಪಿ ವಿನ್ಯಾಸವನ್ನು ಹೊಸ ಬಗೆಯಲ್ಲಿ ಅಭ್ಯಸಿಸಿ, ಲಿಪಿ ಅಧ್ಯಯನಕ್ಕೊಂದು ಮಾದರಿಯನ್ನು ಷ.ಶೆಟ್ಟರ್ ಅವರು ಇಲ್ಲಿ ಒದಗಿಸಿದ್ದಾರೆ. ಕ್ರಿ.ಶ ಎಂಟನೆಯ ಶತಮಾನದ ಪೂರ್ವಾರ್ಧದ ಈ ಕಲ್ಬರಹದ ಓದು ನಿಮ್ಮನ್ನು ಸಾವಿರದ ಇನ್ನೂರು ವರ್ಷಗಳ ಹಿಂದಕ್ಕೆ ಕೊಂಡೊಯ್ದು ಕಳೆದ ನೂರು ವರ್ಷಗಳಿಂದಲೂ ಚರ್ಚೆಯಾಗುತ್ತಿರುವ ಈ ಶಾಸನದ ಬಗ್ಗೆ ಹೊಸ ಹೊಳಹುಗಳನ್ನು ಕೊಡುತ್ತದೆ.
