Shreeharsha Saalimata
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶ್ರೀಹರ್ಷ ಸಾಲಿಮಠರ ಈ ಕತೆಗಳಲ್ಲಿ ಕತೆ ಕಟ್ಟುವ ಕಸುಬುದಾರಿಕೆಗಿಂತಲೂ ನಡೆದದ್ದನ್ನು ನಿರೂಪಿಸುವ ಪ್ರತಿಭೆ ಹೆಚ್ಚು ಕ್ರಿಯಾಶೀಲವಾಗಿರುವುದು ಕಂಡು ಬರುತ್ತದೆ. ಈ ಕತೆಗಳಲ್ಲಿ ಅವರೊಳಗಿನ ಚಿಂತಕ ಕತೆಗಾರನಿಗೆ ಜಾಗ ಬಿಟ್ಟು ಹಿಂದಿನ ಸಾಲಿನಲ್ಲಿ ಕೂರುತ್ತಾನೆ. ಹಾಗಾಗಿ ಓದುಗ ಕತೆಯ ಓದಿನ ಸೊಗಸಾದ ಅನುಭವವನ್ನು ಅದರ ಮೂಲಸತ್ವದ ಸಮೇತವಾಗಿ ಪಡೆಯಲು ಸಾಧ್ಯವಾಗುತ್ತದೆ.
'ಗಂಧಕ್ಕೊಂದು ಬರೆ', 'ಸದ್ಗತಿ' ಹಾಗೂ 'ಉಡಾಳ ಬಸ್ಯಾನ ಖೂನಿ' ಕತೆಗಳಲ್ಲಿ ಕತೆಗಾರನ ಸತ್ವ ಬಹಳ ತಾಜಾ ಆಗಿ ಅನಾವರಣಗೊಂಡಿದೆ. ಇವು ಗ್ರಾಮೀಣ ಜೀವನದ ಒಂದು ವಿಶಿಷ್ಟ ಪರಿಸರದ ಅನನ್ಯ ಕಥನಗಳಾಗಿವೆ. ಗ್ರಾಮ ಜೀವನದಲ್ಲಿ ಕಂಡುಬರುವ ಇಂತಹ ಕೋನಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಚಿತ್ರಿಸಿರುವ ಪರಿ ಶ್ರೀಹರ್ಷರಿಗೆ ಇರುವ ಬರವಣಿಗೆಯ ಹದಕ್ಕೆ ಕನ್ನಡಿ ಹಿಡಿಯುತ್ತಿದೆ.
ಅವರ ಸಾಹಿತ್ಯಾಸಕ್ತಿ ಮತ್ತು ಜೀವನಾನುಭವಗಳ ವಿಸ್ತಾರ ಕನ್ನಡಕ್ಕೆ ಒಬ್ಬ ಒಳ್ಳೆಯ ಕತೆಗಾರನನ್ನು ಕೊಡಲು ಸಜ್ಜಾಗಿದೆ. ಕಥನ ಶೈಲಿಯೂ ಚೇತೋಹಾರಿಯಾಗಿದೆ. ಅವರಿಂದ ಕನ್ನಡ ಕಥಾ ಸಾಹಿತ್ಯ ಸಮೃದ್ಧಗೊಳ್ಳಲಿ ಎಂದು ಹಾರೈಸುತ್ತಿದ್ದೇನೆ.
ಡಾ. ಬಂಜಗೆರೆ ಜಯಪ್ರಕಾಶ್
'ಗಂಧಕ್ಕೊಂದು ಬರೆ', 'ಸದ್ಗತಿ' ಹಾಗೂ 'ಉಡಾಳ ಬಸ್ಯಾನ ಖೂನಿ' ಕತೆಗಳಲ್ಲಿ ಕತೆಗಾರನ ಸತ್ವ ಬಹಳ ತಾಜಾ ಆಗಿ ಅನಾವರಣಗೊಂಡಿದೆ. ಇವು ಗ್ರಾಮೀಣ ಜೀವನದ ಒಂದು ವಿಶಿಷ್ಟ ಪರಿಸರದ ಅನನ್ಯ ಕಥನಗಳಾಗಿವೆ. ಗ್ರಾಮ ಜೀವನದಲ್ಲಿ ಕಂಡುಬರುವ ಇಂತಹ ಕೋನಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಚಿತ್ರಿಸಿರುವ ಪರಿ ಶ್ರೀಹರ್ಷರಿಗೆ ಇರುವ ಬರವಣಿಗೆಯ ಹದಕ್ಕೆ ಕನ್ನಡಿ ಹಿಡಿಯುತ್ತಿದೆ.
ಅವರ ಸಾಹಿತ್ಯಾಸಕ್ತಿ ಮತ್ತು ಜೀವನಾನುಭವಗಳ ವಿಸ್ತಾರ ಕನ್ನಡಕ್ಕೆ ಒಬ್ಬ ಒಳ್ಳೆಯ ಕತೆಗಾರನನ್ನು ಕೊಡಲು ಸಜ್ಜಾಗಿದೆ. ಕಥನ ಶೈಲಿಯೂ ಚೇತೋಹಾರಿಯಾಗಿದೆ. ಅವರಿಂದ ಕನ್ನಡ ಕಥಾ ಸಾಹಿತ್ಯ ಸಮೃದ್ಧಗೊಳ್ಳಲಿ ಎಂದು ಹಾರೈಸುತ್ತಿದ್ದೇನೆ.
ಡಾ. ಬಂಜಗೆರೆ ಜಯಪ್ರಕಾಶ್
