1
/
of
2
D. V. G.
ಶ್ರೀರಾಮ ಪರೀಕ್ಷಣಂ
ಶ್ರೀರಾಮ ಪರೀಕ್ಷಣಂ
Publisher - ಸಾಹಿತ್ಯ ಭಂಡಾರ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 125
Type - Paperback
Couldn't load pickup availability
ಶ್ರೀರಾಮನು ಪುರಾಣ ಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಆತನು ಕೂಡ ವಿಚಾರ ಮಾಡಿದ್ದಾನೆ, ಸಾಧನೆಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲೈ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡೆಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಲುಗಳು, ಪಾಪವೃತ್ತಾಂತದಿಂದ ಮನಃಪರಿತಾಪ; ಆತ್ಮ ತಾಪದಿಂದ ಧರ್ಮ ವಿಚಾರ ಕುತೂಹಲ; ಈ ವಿಚಾರ ಕುತೂಹಲದಿಂದ ಮಾನವಸ್ವಭಾವ ಪರಾಮರ್ಶೆ, ಅದರಿಂದ ಸೃಷ್ಟಿ ತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ ಪರತತ್ವ ದರ್ಶನ, ಪರಮಶಾಂತಿ-ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಶೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡೆಸಿತೆಂಬುದನ್ನೂ ಡಿ.ವಿ.ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ; ಈ ಆತ್ಮಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು, ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ. ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮಸೂಕ್ಷ್ಮಗಳ ಮತ್ತು ಜೀವನರಹಸ್ಯಗಳ ಬೋಧೆ, ಮುಮುಕ್ಷುಗಳಿಗೆ ಅಧ್ಯಾತ್ಮ ಜ್ಞಾನ ಈ ಮೂರೂ ಈ ಸಣ್ಣ ಕಾವ್ಯದಲ್ಲಿ ದೊರೆಯುವುದರಿಂದ ನಮ್ಮ ಜೀವನಯಾತ್ರೆಯೂ ಸಹ ಕ್ರಮವಾಗಿ ಈ ಮೆಟ್ಟಲುಗಳನ್ನು ಹತ್ತಿ ಕಡೆಗೆ ಮೌನಗಂಭೀರದ ನಿತ್ಯಶಾಂತಿಯಲ್ಲಿ ಪರಿಣಾಮಕಾರಿಯಾಗಲೆಂದು ಡಿ.ವಿ.ಜಿ. ಅವರು ಹಾರೈಸುತ್ತಾರೆಂದು ತೋರುತ್ತದೆ.
ಡಿ.ವಿ.ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.
-ಎಂ. ಆರ್. ಶ್ರೀ.
'ಶ್ರೀರಾಮ ಪರೀಕ್ಷಣಂ'... ವಿಷಯ ಹಳೆಯದಾದರೂ ಆಧುನಿಕ ದೃಷ್ಟಿಯಿಂದ ನೋಡಿ ಮಾಡಿದ ಜೀವನ ವಿಮರ್ಶೆಯಿದೆ, ಲೌಕಿಕ ಮತ್ತು ಧಾರ್ಮಿಕ ತತ್ತ್ವಗಳ ಸೂಕ್ಷ್ಮ ವಿವೇಚನೆಯಿದೆ.
-ಡಾ. ಎ. ಆರ್. ಕೃಷ್ಣಶಾಸ್ತ್ರೀ
'ಶ್ರೀರಾಮ ಪರೀಕ್ಷಣ'ವೆಂಬ ಪುಟ್ಟ ಕಾವ್ಯವು ಶ್ರೀರಾಮರಶ್ಮಿಗೆ ಒಡ್ಡಿದ ಮುಮ್ಮೂಲೆಯ ಪಟ್ಟಕದಂತಿದ್ದು (Prism) ಶ್ರೀರಾಮನ ಅಂತರಂಗಜ್ಯೋತಿಯನ್ನು ಬಣ್ಣಬಣ್ಣವಾಗಿ ಬಿಡಿಸಿ ತೋರಿಸಿದೆ.
– ಕಾವ್ಯತರಂಗಿಣಿ (ಮೈಸೂರು ವಿಶ್ವವಿದ್ಯಾನಿಲಯ)
ಡಿ.ವಿ.ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.
-ಎಂ. ಆರ್. ಶ್ರೀ.
'ಶ್ರೀರಾಮ ಪರೀಕ್ಷಣಂ'... ವಿಷಯ ಹಳೆಯದಾದರೂ ಆಧುನಿಕ ದೃಷ್ಟಿಯಿಂದ ನೋಡಿ ಮಾಡಿದ ಜೀವನ ವಿಮರ್ಶೆಯಿದೆ, ಲೌಕಿಕ ಮತ್ತು ಧಾರ್ಮಿಕ ತತ್ತ್ವಗಳ ಸೂಕ್ಷ್ಮ ವಿವೇಚನೆಯಿದೆ.
-ಡಾ. ಎ. ಆರ್. ಕೃಷ್ಣಶಾಸ್ತ್ರೀ
'ಶ್ರೀರಾಮ ಪರೀಕ್ಷಣ'ವೆಂಬ ಪುಟ್ಟ ಕಾವ್ಯವು ಶ್ರೀರಾಮರಶ್ಮಿಗೆ ಒಡ್ಡಿದ ಮುಮ್ಮೂಲೆಯ ಪಟ್ಟಕದಂತಿದ್ದು (Prism) ಶ್ರೀರಾಮನ ಅಂತರಂಗಜ್ಯೋತಿಯನ್ನು ಬಣ್ಣಬಣ್ಣವಾಗಿ ಬಿಡಿಸಿ ತೋರಿಸಿದೆ.
– ಕಾವ್ಯತರಂಗಿಣಿ (ಮೈಸೂರು ವಿಶ್ವವಿದ್ಯಾನಿಲಯ)
Share


Subscribe to our emails
Subscribe to our mailing list for insider news, product launches, and more.