Prof. Hampa Nagarajaiah
Publisher - ಸಪ್ನ ಬುಕ್ ಹೌಸ್
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕವಿರಾಜಮಾರ್ಗ ಕನ್ನಡ ಸಾಹಿತ್ಯದ ಕಾಮನಬಿಲ್ಲು. ಶ್ರೀವಿಜಯನು ಅಭಿಜಾತ ಸಾಹಿತ್ಯ ಪರಂಪರೆಯ ಸ್ರೋತವನ್ನು ಉನ್ಮೀಲನಗೊಳಿಸಿದ ಪ್ರತಿಭಾಶಾಲಿ, ಕನ್ನಡದ ಅಸ್ಮಿತೆಗೆ ಕೆಸರ್ಗಲ್ಲನಿಟ್ಟ ಮಾರ್ಗಕವಿ. ಆತ ಅನೇಕ ಪ್ರಥಮಗಳ ಸರದಾರ. ಚಂಪೂ ಕಾವ್ಯಗಳನ್ನು ಆರಂಭಿಸಿದ್ದು, ಲೌಕಿಕ-ಆಗಮಿಕ ಎಂಬ ಗಂಡಭೇರುಂಡ ಕಾವ್ಯಪದ್ಧತಿಯನ್ನು ಪ್ರಾರಂಭಿಸಿದ್ದು, ಸಂಸ್ಕೃತ ಕೃತಿಗಳನ್ನು ಕನ್ನಡಿಸುವ ಪರಂಪರೆಗೆ ನಾಂದಿ ಹಾಡಿದ್ದು, ರಾಜಾಶ್ರಯದಲ್ಲಿ ವಿಜೃಂಭಿಸಿದ್ದು, ಆಶ್ರಯವಿತ್ತ ರಾಜನನ್ನು ಪುರಾಣಪಾತ್ರದೊಂದಿಗೆ ಪರಿಪಾಟಿಯನ್ನು ಉದ್ಘಾಟಿಸಿದ್ದು, ನಾನಾ ಸಮೀಕರಿಸಿ ಕಾವ್ಯ ರಚಿಸುವ ಸಂಸ್ಕೃತ ವೃತ್ತಗಳನ್ನು ಕನ್ನಡಕ್ಕೆ ಕಸಿಮಾಡಿ ಕಾವ್ಯದಲ್ಲಿ ಪ್ರಯೋಗಿಸಿದ್ದು ಮೊದಲಾದುವೆಲ್ಲವೂ ಶ್ರೀವಿಜಯನಿಂದ ಆರಂಭವಾದ ಹೊಚ್ಚ ಹೊಸ ಪ್ರಯೋಗಗಳು, ಪಂಚತಂತ್ರ ಕಾವ್ಯವನ್ನು ರಚಿಸಿದ ದುರ್ಗಸಿಂಹಕವಿಯು ಶ್ರೀವಿಜಯರು ದೇವರು, ಅವರನ್ನು ಇನ್ನೇನು ವರ್ಣಿಸಲಿ” ಎಂದು ಕೊಂಡಾಡಿದ್ದಾನೆ. ಕನ್ನಡ ಸಾಹಿತ್ಯದಲ್ಲಿ 'ದೇವರು' ಎಂಬ ದೊಡ್ಡ ಮನ್ನಣೆಗೆ ಪಾತ್ರನಾದ ಏಕೈಕ ಕವಿಶ್ರೀವಜಯ !
