Nagesh Kumar. C. S.
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 136
Type - Paperback
ಖ್ಯಾತ ಲೇಖಕ ಕೆ. ಸತ್ಯನಾರಾಯಣ ಹೇಳುತ್ತಾರೆ:
ಪತ್ತೇದಾರಿ ಬರವಣಿಗೆಯನ್ನು ಮಾಡುವಾಗಲೂ ಅತಿ ರೋಚಕ ವಿವರ-ಘಟನೆಗಳನ್ನು ಅವಲಂಬಿಸದೇ ಕಥನ ಪಡೆಯುವ ತಿರುವು, ಕಥಾವಸ್ತುವಿನಲ್ಲಿರುವ ತರ್ಕದ ಸಾಧ್ಯತೆಗಳ ಜಾಡನ್ನು ಹಿಡಿದು ನೇರ ಸರಳ ಬರವಣಿಗೆಯಲ್ಲಿಓದುಗರಿಗೆ ಮನದಟ್ಟಾಗುವಂತೆ ಬರೆಯಬಲ್ಲನಾಗೇಶ್ ಕುಮಾರ್ ಓದುಗರ ಕುತೂಹಲವನ್ನು ಮಾತ್ರವಲ್ಲ ಪ್ರೀತಿಯನ್ನು ಕೂಡಾ ಸಂಪಾದಿಸುತ್ತಾರೆ.
ನಮ್ಮಲ್ಲಿ ಪತ್ತೇದಾರಿ ಸಾಹಿತ್ಯ ಮುಗಿದೇ ಹೋಯಿತು ಎಂದು ಆತಂಕಗೊಂಡಿರುವ ಸಮಯದಲ್ಲಿ ಹೀಗೆ ಗುಣಾತ್ಮಕ ಹಾಗೂ ನಿರಂತರ ಬರವಣಿಗೆಯ ಮೂಲಕ ಒಂದು ಶ್ರೀಮಂತ ಪರಂಪರೆಯನ್ನು ಪುನರ್ಜೀವಗೊಳಿಸುತ್ತಾ ಅದನ್ನು ವಿಸ್ತರಿಸಲೂ ಕೂಡಾ ಪ್ರಯತ್ನಿಸಿ ಈಗಾಗಲೇ ಗಣನೀಯ ಯಶಸ್ಸನ್ನು ಪಡೆದಿರುವ ನಾಗೇಶ್ ಕುಮಾರ್. ಸಿ. ಎಸ್.