M. S. Narasimhamurthy
Publisher - ಸಪ್ನ ಬುಕ್ ಹೌಸ್
Regular price
Rs. 130.00
Regular price
Rs. 130.00
Sale price
Rs. 130.00
Unit price
per
- Free Shipping Above ₹200
- Cash on Delivery (COD) Available
Pages - 137
Type - Paperback
ಮಾರಲ್ಸ್ ಇದ್ರೆ ಮಂಕಿ ಆಗೊಲ್ಲ...
ನಗೆ ಎಂಬುದು ವಿಶ್ವವ್ಯಾಪಕ. ನಗೆ ಬರಹಗಳೆಂದರೆ ಎಲ್ಲರಿಗೂ ಪ್ರಿಯ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ೩೦ ಆಯ್ದ ಬರಹಗಳು ಇಲ್ಲಿವೆ. ಕಡೆಯ ಎರಡು ಲೇಖನಗಳನ್ನು "ಸುಧಾ" ವಿಶೇಷ ಸಂಚಿಕೆಗಾಗಿ ಬರೆದಿದ್ದು. ಇದರಲ್ಲಿ ಪ್ರಚಲಿತ ರಾಜಕೀಯ ದೊಂಬರಾಟಗಳ ವಿಶ್ಲೇಷಣೆ ಇದೆ. "ಆನ್ ಲೈನ್ ಸನ್ಮಾನ" ನನಗೆ ಆದ ಸ್ವಂತ ಅನುಭವ, ಲಂಡನ್ ಕನ್ನಡ ಸಂಘಕ್ಕೆ ಭಾಷಣ ಮಾಡಲು ಹೋಗಬೇಕಿದ್ದ ನಾನು ಕರೋನ ಪ್ರಯುಕ್ತ ಮನೆಯಿಂದಲೇ ಮಾತಾಡಿದೆ. ಫೈಟುಗಳು ರದ್ದಾಗಿದ್ದವು. ಆಗ ಲಂಡನ್ನವರು ನನಗೆ ಆನ್ಲೈನ್ನಲ್ಲಿ ಮಾತಾಡಲು ಹೇಳಿದರು, ಆನ್ಲೈನ್ನಲ್ಲೇ ಸನ್ಮಾನ ಮಾಡಿದರು. ಇದರಲ್ಲಿ ಅರ್ಧಕಲ್ಪನೆ, ಅರ್ಧ ಸತ್ಯವಿದೆ. ಕರೋನಾಗೆ ಸಂಬಂಧಿಸಿದ ಅನೇಕ ನಗೆ ಬರಹಗಳು ಇಲ್ಲಿವೆ.
ಇನ್ನು ಮಾಸ್ಟರ್ ಹಿರಣ್ಣಯ್ಯರವರ ಬಗ್ಗೆ ಒಂದು ವಿಶೇಷ ಲೇಖನ ಇದರಲ್ಲಿ ಸೇರಿದೆ. ಅದರಲ್ಲೂ ಸಾಕಷ್ಟು ನಗೆ ತುಂಬಿದೆ. “ಮಂಕಿಗೆ ಮಾರಲ್ಸ್ ಇಲ್ಲ" ಎಂಬ ಲೇಖನ ಟಿ.ಪಿ.ಕೈಲಾಸಂರವರ ಧಾಟಿಯಲ್ಲಿ ಬರೆದಿದ್ದು. ಅಪರಂಜಿ ಶಿವಕುಮಾರ್ರವರು ನನಗೆ ಹೇಳಿ ಬರೆಸಿದ ಲೇಖನವಿದು.
ಇಲ್ಲಿರುವ ಬರಹಗಳನ್ನು ಪ್ರಕಟಿಸಿದ ಆಯಾ ಸಂಪಾದಕರುಗಳಿಗೆ ನನ್ನ ವಂದನೆಗಳು. ಹಾಗೇ ಡಿ.ಟಿ.ಪಿ.ಯನ್ನು ಮಾಡಿಕೊಟ್ಟ ಶ್ರೀಮತಿ ಪ್ರಭಾಶೇಖರ್ ಅವರಿಗೆ, ಪುಸ್ತಕ ಪ್ರಕಟಿಸುತ್ತಿರುವ ಸಪ್ನ ಬುಕ್ ಹೌಸ್ಗೆ, ಸುಂದರವಾಗಿ ಮುದ್ರಣ ಮಾಡಿಕೊಟ್ಟ ಪ್ರಿಂಟ್ ಕ್ ಅವರಿಗೆ, ಮುಖ ಪುಟ ರಚಿಸಿದ ಕಲಾವಿದರಿಗೆ, ಕೊಂಡು ಪ್ರೋತ್ಸಾಹ ನೀಡುತ್ತಿರುವ ತಮಗೆ ನನ್ನ ಹೃತ್ತೂರ್ವಕ ವಂದನೆಗಳು.
-ಎಂ.ಎಸ್. ನರಸಿಂಹಮೂರ್ತಿ
ನಗೆ ಎಂಬುದು ವಿಶ್ವವ್ಯಾಪಕ. ನಗೆ ಬರಹಗಳೆಂದರೆ ಎಲ್ಲರಿಗೂ ಪ್ರಿಯ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ೩೦ ಆಯ್ದ ಬರಹಗಳು ಇಲ್ಲಿವೆ. ಕಡೆಯ ಎರಡು ಲೇಖನಗಳನ್ನು "ಸುಧಾ" ವಿಶೇಷ ಸಂಚಿಕೆಗಾಗಿ ಬರೆದಿದ್ದು. ಇದರಲ್ಲಿ ಪ್ರಚಲಿತ ರಾಜಕೀಯ ದೊಂಬರಾಟಗಳ ವಿಶ್ಲೇಷಣೆ ಇದೆ. "ಆನ್ ಲೈನ್ ಸನ್ಮಾನ" ನನಗೆ ಆದ ಸ್ವಂತ ಅನುಭವ, ಲಂಡನ್ ಕನ್ನಡ ಸಂಘಕ್ಕೆ ಭಾಷಣ ಮಾಡಲು ಹೋಗಬೇಕಿದ್ದ ನಾನು ಕರೋನ ಪ್ರಯುಕ್ತ ಮನೆಯಿಂದಲೇ ಮಾತಾಡಿದೆ. ಫೈಟುಗಳು ರದ್ದಾಗಿದ್ದವು. ಆಗ ಲಂಡನ್ನವರು ನನಗೆ ಆನ್ಲೈನ್ನಲ್ಲಿ ಮಾತಾಡಲು ಹೇಳಿದರು, ಆನ್ಲೈನ್ನಲ್ಲೇ ಸನ್ಮಾನ ಮಾಡಿದರು. ಇದರಲ್ಲಿ ಅರ್ಧಕಲ್ಪನೆ, ಅರ್ಧ ಸತ್ಯವಿದೆ. ಕರೋನಾಗೆ ಸಂಬಂಧಿಸಿದ ಅನೇಕ ನಗೆ ಬರಹಗಳು ಇಲ್ಲಿವೆ.
ಇನ್ನು ಮಾಸ್ಟರ್ ಹಿರಣ್ಣಯ್ಯರವರ ಬಗ್ಗೆ ಒಂದು ವಿಶೇಷ ಲೇಖನ ಇದರಲ್ಲಿ ಸೇರಿದೆ. ಅದರಲ್ಲೂ ಸಾಕಷ್ಟು ನಗೆ ತುಂಬಿದೆ. “ಮಂಕಿಗೆ ಮಾರಲ್ಸ್ ಇಲ್ಲ" ಎಂಬ ಲೇಖನ ಟಿ.ಪಿ.ಕೈಲಾಸಂರವರ ಧಾಟಿಯಲ್ಲಿ ಬರೆದಿದ್ದು. ಅಪರಂಜಿ ಶಿವಕುಮಾರ್ರವರು ನನಗೆ ಹೇಳಿ ಬರೆಸಿದ ಲೇಖನವಿದು.
ಇಲ್ಲಿರುವ ಬರಹಗಳನ್ನು ಪ್ರಕಟಿಸಿದ ಆಯಾ ಸಂಪಾದಕರುಗಳಿಗೆ ನನ್ನ ವಂದನೆಗಳು. ಹಾಗೇ ಡಿ.ಟಿ.ಪಿ.ಯನ್ನು ಮಾಡಿಕೊಟ್ಟ ಶ್ರೀಮತಿ ಪ್ರಭಾಶೇಖರ್ ಅವರಿಗೆ, ಪುಸ್ತಕ ಪ್ರಕಟಿಸುತ್ತಿರುವ ಸಪ್ನ ಬುಕ್ ಹೌಸ್ಗೆ, ಸುಂದರವಾಗಿ ಮುದ್ರಣ ಮಾಡಿಕೊಟ್ಟ ಪ್ರಿಂಟ್ ಕ್ ಅವರಿಗೆ, ಮುಖ ಪುಟ ರಚಿಸಿದ ಕಲಾವಿದರಿಗೆ, ಕೊಂಡು ಪ್ರೋತ್ಸಾಹ ನೀಡುತ್ತಿರುವ ತಮಗೆ ನನ್ನ ಹೃತ್ತೂರ್ವಕ ವಂದನೆಗಳು.
-ಎಂ.ಎಸ್. ನರಸಿಂಹಮೂರ್ತಿ