G. S. Jayadeva
Publisher - ನವಕರ್ನಾಟಕ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 128
Type - Paperback
ಶ್ರೀ ಜಿ. ಎಸ್. ಜಯದೇವ್ ಅವರು ಆವಕಾಶವಂಚಿತ ಮಕ್ಕಳಿಗಾಗಿ ದೀನಬಂಧು ಸಂಸ್ಥೆಯನ್ನು ಸ್ಥಾಪಿಸಿ, ಮಕ್ಕಳ ಪುನರ್ವಸತಿ, ಶಿಕ್ಷಣ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ನೆಲೆಸಿರುವ ಇವರು ತಳಸಮುದಾಯಗಳ ಬಡಮಕ್ಕಳಿಗಾಗಿ, ವಿಶೇಷವಾದ ಕನ್ನಡ ಮಾಧ್ಯಮ ಶಾಲೆಯನ್ನು ಕಳೆದ 25 ವರ್ಷಗಳಿಂದಲೂ ನಡೆಸುತ್ತಿದ್ದಾರೆ.ಬಿಳಿಗಿರಿರಂಗನ ಬೆಟ್ಟದ ಗಿರಿಜನ ಮಕ್ಕಳೊಡನೆ ಕೆಲಸ ಮಾಡಿದ ಅನುಭವವೂ ಇದೆ, ಈಗ ದೀನಬಂಧು ಸಂಸ್ಥೆಯ ಅಧ್ಯಾಪಕ ಸಂಪನ್ಮೂಲ ಕೇಂದ್ರದ ಮೂಲಕ 200 ಸರ್ಕಾರಿ ಶಾಲೆಗಳ ಅಧ್ಯಾಪಕರಿಗೆ ತರಬೇತಿ ನೀಡುವ ಕೆಲಸವು ನಡೆಯುತ್ತಿದೆ.
ಜಯದೇವ್ ಅವರು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಪ್ರಯೋಗಾತ್ಮಕವಾಗಿ ಮಾಡಿದ ಕೆಲಸಗಳ ಅನುಭವ 'ಮಕ್ಕಳ ಬೆಳವಣಿಗೆ ಮತ್ತು ನಾವು ಪುಸ್ತಕ ರೂಪದಲ್ಲ ಬಂದಿದೆ. ಮಕ್ಕಳ ಮನೋವೈಜ್ಞಾನಿಕ ಸಮಸ್ಯೆ ಗಳನ್ನು ಪ್ರೀತಿಯಿಂದ ಮತ್ತು ಅವರನ್ನು ಹೃಪೂರ್ವಕವಾಗಿ ಸ್ವೀಕರಿಸುವ ಮೂಲಕ ಹೇಗೆ ಪರಿಹರಿಸಬಹುದು ಎಂಬ ಅನುಭವವನ್ನು ಮನೋಜ್ಞವಾಗಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ