Yatiraj Veerambudhi
Publisher -
- Free Shipping Above ₹200
- Cash on Delivery (COD) Available
Pages -
Type -
ಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೆರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ, ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿರುತ್ತದೆ. ಕೆಲವೊಮ್ಮೆ ಅದಕ್ಕೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು.
-ಯತಿರಾಜ್ ವೀರಾಂಬುಧಿ