Ravi Belagere
Publisher - ಭಾವನಾ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 62
Type - Paperback
ಇತ್ತೀಚೆಗೆ ನನ್ನ ಬಹುಕಾಲದ ಗೆಳೆಯರೂ, ಚಿತ್ರ ನಿರ್ಮಾಪಕರೂ, ರಾಜಕಾರಣಿಯೂ ಆದ ಮುನಿರತ್ನ ಭೇಟಿಯಾದಾಗ ಅಕಸ್ಮಾತ್ತಾಗಿ ಚರ್ಚೆಗೆ ಬಂದದ್ದು ಮದರಾಸಿನ 'ಶರವಣ ಭವನ' ಮಾಲೀಕ ಮಾಡಿಸಿದ ಪ್ರಿನ್ಸ್ ಶಾಂತಕುಮಾರ್ನ ಕೊಲೆಯ ಸಂಗತಿ. 'ಶರವಣ ಭವನ' ಹೊಟೇಲುಗಳು ಇವತ್ತು ಒಂದೆರಡಲ್ಲ : ನೂರಾರಿವೆ. ಲಂಡನ್ ಒಂದರಲ್ಲೇ ಅದರ ಹದಿನಾರು ಶಾಖೆಗಳಿವೆ. ಕೋಟ್ಯಂತರದ ವಹಿವಾಟು. ಅದರ ಮಾಲೀಕ ರಾಜಗೋಪಾಲ್ ಕೇವಲ ಒಬ್ಬ ಟೇಬಲ್ ಒರೆಸುವ ನೌಕರನಾಗಿ ಬದುಕು ಆರಂಭಿಸಿ ಕೋಟ್ಯಂತರ ಗಳಿಸಿದ ಸಾಧಕ. ಎರಡು ಮದುವೆ ಆಗಿತ್ತು. ಮಕ್ಕಳೂ ಬೆಳೆದು ನಿಂತಿದ್ದರು. ಆದರೆ ಆಸೆಯ ಮಧ್ಯವಯಸ್ಕ ಮೂರನೆಯ ಹುಡುಗಿಗಾಗಿ ಕೈ ಚಾಚಿದ. ಅದು ಸಾಧ್ಯವಾಗದೆ ಇದ್ದಾಗ ಆ ಹುಡುಗಿಯ ಗಂಡನನ್ನೇ ಕೊಲೆ ಮಾಡಿಸಿಬಿಟ್ಟ.
ಮುಂದೇನಾಯಿತು?
ಅದರ ಪೂರ್ತಿ ವಿವರ ಚಕಿತಗೊಳಿಸುವ ರೀತಿಯಲ್ಲಿದೆ, ಓದಿಕೊಳ್ಳಿ :
'ಇಡ್ಲಿ ವಡ ಡೆಡ್ಲಿ ಮರ್ಡರ್!'
-ಭಾವನಾ ಬೆಳಗೆರೆ