Bharathisuta
Publisher - ರವೀಂದ್ರ ಪುಸ್ತಕಾಲಯ
Regular price
Rs. 170.00
Regular price
Rs. 170.00
Sale price
Rs. 170.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪಣಿಯರೆಂದರೆ ವೈನಾಡಿನ ಗಿರಿಜನರಲ್ಲಿ ಒಂದು ವರ್ಗದವರು, ಕೊಡಗಿನಲ್ಲಿ ಈ ಜನರನ್ನು ಎರವರು ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಜನರ ಬಾಳ್ವೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಈ ಕಾದಂಬರಿಯನ್ನು ಹೆಣೆದಿದ್ದೇನೆ. ಈ ಕಾದಂಬರಿಯಲ್ಲಿ ಚಿತ್ರಿಸಿರುವ ಪಣಿಯರ ಜೀವನ ಸುಮಾರು ಕಾಲು ಶತಮಾನ ಹಿಂದಿನದು. ಇತ್ತೀಚೆಗೆ ಕೇಂದ್ರ ಮತ್ತು ಪ್ರಾಂತ ಸರಕಾರದವರು ಗಿರಿಜನರ ಉದ್ಧಾರಕ್ಕಾಗಿ ಅನೇಕ ಅಭಿವೃದ್ಧಿ ಉದ್ಯಮಗಳನ್ನು ಕೈಗೊಂಡಿರುವುದರಿಂದ ಪಣಿಯರ ಜೀವನದಲ್ಲಿ ಹಲವು ಮಾರ್ಪಾಡುಗಳುಂಟಾಗಿವೆ.
ನಾನು ಕಾದಂಬರಿಯಲ್ಲಿ ಬಂದ ಸಂಭಾಷಣೆಗಳಲ್ಲಿ ಅಲ್ಲಲ್ಲಿ ಹಲವು ಪಣಿಯ ನುಡಿಗಳನ್ನು ಬಳಸಿದ್ದೇನೆ. ಹೀಗೆ ಬಳಸಿದ ಪದಗಳ ಅರ್ಥಕೋಶವನ್ನು ಕಾದಂಬರಿಯ ಕೊನೆಯಲ್ಲಿ ಕೊಟ್ಟಿದ್ದೇನೆ. ನನ್ನ 'ಹುಲಿ ಬೋನು', 'ಬೆಳ್ಳಿ ಮೂಡಿತು' ಎಂಬ ಕಾದಂಬರಿಗಳಂತೆಯೇ, 'ಗಿರಿಕನ್ನಿಕೆ' ಓದುಗರ ಮೆಚ್ಚುಗೆಯನ್ನು ಗಳಿಸುವುದು ಎಂಬ ಭರವಸೆ ನನಗಿದೆ.
ಬೆಂಗಳೂರಿನ ಶಾರದಾ ಪ್ರಕಟನಾಲಯದವರು ಈ ಕಾದಂಬರಿಯನ್ನು ಪ್ರಕಟಿಸಿ ಬೆಳಕಿಗೆ ತರುವುದರಲ್ಲಿ ನೆರವಾಗಿದ್ದಾರೆ. ಅವರಿಗೆ ನಾನು ಹಾರ್ದಿಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-ಭಾ, ಸು.
ನಾನು ಕಾದಂಬರಿಯಲ್ಲಿ ಬಂದ ಸಂಭಾಷಣೆಗಳಲ್ಲಿ ಅಲ್ಲಲ್ಲಿ ಹಲವು ಪಣಿಯ ನುಡಿಗಳನ್ನು ಬಳಸಿದ್ದೇನೆ. ಹೀಗೆ ಬಳಸಿದ ಪದಗಳ ಅರ್ಥಕೋಶವನ್ನು ಕಾದಂಬರಿಯ ಕೊನೆಯಲ್ಲಿ ಕೊಟ್ಟಿದ್ದೇನೆ. ನನ್ನ 'ಹುಲಿ ಬೋನು', 'ಬೆಳ್ಳಿ ಮೂಡಿತು' ಎಂಬ ಕಾದಂಬರಿಗಳಂತೆಯೇ, 'ಗಿರಿಕನ್ನಿಕೆ' ಓದುಗರ ಮೆಚ್ಚುಗೆಯನ್ನು ಗಳಿಸುವುದು ಎಂಬ ಭರವಸೆ ನನಗಿದೆ.
ಬೆಂಗಳೂರಿನ ಶಾರದಾ ಪ್ರಕಟನಾಲಯದವರು ಈ ಕಾದಂಬರಿಯನ್ನು ಪ್ರಕಟಿಸಿ ಬೆಳಕಿಗೆ ತರುವುದರಲ್ಲಿ ನೆರವಾಗಿದ್ದಾರೆ. ಅವರಿಗೆ ನಾನು ಹಾರ್ದಿಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-ಭಾ, ಸು.
