Dr. M. Gopalakrishna Rao
Publisher - ದಿವ್ಯ ಪ್ರಕಾಶನ
Regular price
Rs. 1,300.00
Regular price
Rs. 1,300.00
Sale price
Rs. 1,300.00
Unit price
per
- Free Shipping Above ₹200
- Cash on Delivery (COD) Available
Pages - 828
Type - Paperback
ಈ ಬೃಹತ್ ಗ್ರಂಥವನ್ನು ಅತ್ಯಂತ ಅಭಿರುಚಿಯಿಂದ, ಆಸಕ್ತಿಯಿಂದ, ಏಕಾಗ್ರತೆಯಿಂದ, ಶ್ರದ್ದೆಯಿಂದ, ಪ್ರತಿಯೊಂದು ಶಬ್ದದ ಅನ್ವಯಾರ್ಥ ಮತ್ತು ಭಾವಾರ್ಥಗಳನ್ನು ಬರೆದು ಡಾ|| ವೆಂಕಟಕೃಷ್ಣ ಅವರು ನಿಜವಾಗಿಯೂ ಕರ್ನಾಟಕದ ಆಯುರ್ವೇದ ಜಿಜ್ಞಾಸುಗಳಿಗೆ ಬಹಳ ದೊಡ್ಡ ಅಮೌಲ್ಯ ಗ್ರಂಥವನ್ನು ಕೊಟ್ಟು ಕರ್ನಾಟಕದ ಆಯುರ್ವೇದ ವಿಶ್ವದಲ್ಲಿ ತಮ್ಮದೇ ಆದ ಒಂದು ವೈಶಿಷ್ಟ್ಯವನ್ನು ಪ್ರಸ್ಥಾಪಿಸಿರುವರೆಂಬುದರಲ್ಲಿ ಸಂಶಯದ ಲವಲೇಶವೂ ಇಲ್ಲ. ನಿಜವಾಗಿ ಆಯುರ್ವೇದದ ಗ್ರಂಥಗಳು ಕನ್ನಡ ಭಾಷೆಯಲ್ಲಿ ಬಹುಶಃ ಇರಲಿಕ್ಕಿಲ್ಲವೆಂದು ಅನಿಸುತ್ತದೆ. ಬಹಳಷ್ಟು ಗ್ರಂಥಗಳಲ್ಲಿ ಭಾವಾರ್ಥಗಳಿರುತ್ತವೆ, ಬಹಳವಾದರೆ ಶಬ್ದಾರ್ಥಗಳಿರಬಹುದು, ಆದರೆ ಅನ್ವಯದಲ್ಲಿಯ ಪ್ರತಿಯೊಂದು ಶಬ್ದದ ಅರ್ಥ ಅನ್ವಯಾರ್ಥವೆಂಬ ಭಾವದಲ್ಲಿ ಬರೆದ ಗ್ರಂಥಗಳು ಉಪಲಬ್ಧವಿರುವದು ಕ್ವಚಿತ್ತಾಗಿ ಎಂದು ಹೇಳಬಹುದು. ಡಾ|| ವೆಂಕಟಕೃಷ್ಣ ಅವರು ಇದಕ್ಕಾಗಿ ತಾವು ಮೈಸೂರಿನಲ್ಲಿಯ ಗವರ್ನಮೆಂಟ್ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ಪ್ರಪಂಚದ ಯಾವುದೇ ಹೆಚ್ಚಿನ ಉಪಾಧಿಗಳನ್ನು ಹೊಂದದೆ ಏಕಾಕಿಯಾಗಿದ್ದುಕೊಂಡು ಇದಕ್ಕಾಗಿ ಅವರು ಬಹಳಷ್ಟು ಸಮಯವನ್ನು ತೊಡಗಿಸಿರುವರೆಂಬುದರಲ್ಲಿ ಸಂಶಯವಿಲ್ಲ. ಎಲ್ಲಾ ಆಯುರ್ವೇದ ಜಿಜ್ಞಾಸುಗಳೂ ಹಾಗೂ ಆಯುರ್ವೇದ ವೈದ್ಯ ವಿದ್ಯಾರ್ಥಿಗಳೂ ಇದರ ಪೂರ್ಣ ಪ್ರಯೋಜನ ಪಡೆಯುವಂತಾಗಲಿ ಎಂದು ಆಶಿಸುತ್ತೇವೆ.
ಪ. ಪೂ. ಸದ್ಗುರು ಶ್ರೀ ದತ್ತಾವಧೂತರು (ಶ್ರೀಕ್ಷೇತ್ರ, ಹೆಬ್ಬಳ್ಳಿ)
ಪ. ಪೂ. ಸದ್ಗುರು ಶ್ರೀ ದತ್ತಾವಧೂತರು (ಶ್ರೀಕ್ಷೇತ್ರ, ಹೆಬ್ಬಳ್ಳಿ)