Srirudramurthy Shastri
Publisher - ಐಬಿಹೆಚ್ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 862
Type - Hardcover
ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಬರೆದ ಕೃತಿ-ಚಾಣಕ್ಯ. ಮೌರ್ಯರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಧಾನ ಪಾತ್ರವಹಿಸಿದ್ದ ಚಾಣಕ್ಯ ಕೇವಲ ರಾಜನೀತಿಜ್ಞ ಮಾತ್ರವಲ್ಲ, ವಿಶೇಷ ಆರ್ಥಿಕ ತಜ್ಞನೂ ಆಗಿದ್ದ. ಈತನ ಆರ್ಥಿಕ ನೀತಿಯು ವಿಶ್ವದ ಗಮನ ಸೆಳೆದಿದೆ. ಹತ್ತು ಹಲವು ಅಧ್ಯಯನಗಳು ನಡೆದು, ಅದರ ಪ್ರಸಕ್ತ ಮಹತ್ವವನ್ನು ಸಮರ್ಥಿಸಿವೆ. ಇಂತಹ ರಾಜನೀತಿಜ್ಞನ ದೂರದೃಷ್ಟಿ, ಶತ್ರುಗಳನ್ನು ಸದೆ ಬಡೆಯುವಲ್ಲಿ ಆತನ ಚಾಣಾಕ್ಷತೆ, ಆಡಳಿತ ಕುಶಲತೆ ಇತ್ಯಾದಿ ಪರಿಕಲ್ಪನೆಗಳನ್ನು ಬಿಂಬಿಸುವ ಉದ್ದೇಶದ ಐತಿಹಾಸಿಕ ಘಟನೆಗಳಾಧರಿತ ಕಾದಂಬರಿ ಇದು. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.