Ravi Belagere
ಅವನೊಬ್ಬನಿದ್ದ ಗೋಡ್ಸೆ
ಅವನೊಬ್ಬನಿದ್ದ ಗೋಡ್ಸೆ
Publisher - ಭಾವನಾ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 200
Type - Paperback
Couldn't load pickup availability
ಮೋಹನದಾಸ ಕರಮಚಂದ ಗಾಂಧಿ ಅವರಿಗೆ ಕೈನಿಲುಕಿನ ಅಂತರದಲ್ಲಿ ನಿಂತು ಗುಂಡು ಹೊಡೆದು ಕೊಂದವನು ನಾಥರಾಮ ಗೋಡ್ಸೆ, ಅವನು ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದನಾದರೂ ಮೂಲತಃ ಪಾತಕಿಯಲ್ಲ. ಅವನಲ್ಲಿ ಪ್ರಶ್ನಾತೀತವಾದ ದೇಶಭಕ್ತಿಯಿತ್ತಾದರೂ ಅವನೊಬ್ಬ ದಾರಿತಪ್ಪಿದ ದೇಶಭಕ್ತ. ಅವನೊಂದಿಗೆ ಗಾಂಧಿ ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡ ನಾರಾಯಣ ದತ್ತಾತ್ರಯ ಅಪ್ಪೆಗೆ ವಿಪರೀತವಾದ ಚಾಪಲ್ಯವಿತ್ತು. ಅವನೊಳಗೊಬ್ಬ ಲೇಡಿ ಕಿಲ್ಲರ್ ಇದ್ದ. ಪ್ರೇಯಸಿಯಿದ್ದಳು. ಒಂದು ಪೆಗ್ ವಿಸ್ಕಿ ಕುಡಿಯುತ್ತಿದ್ದ. ಅವನ ಮಗುವಿಗೆ ಮನೋವೈಕಲ್ಯವಿತ್ತು, ಹಿಂದೂದೇಶ ನಿರ್ಮಾಣದ ಹುಮ್ಮಸ್ಸಿಗೆ ಬೀಳುವ ಮುನ್ನ ನಾರಾಯಣ ಅಪ್ಪೆ ಭಾರತೀಯ ಸೇನೆಯಲ್ಲಿ ಆಫೀಸರನಾಗಿದ್ದ. ಇವರಿಬ್ಬರೊಂದಿಗೆ, ಗಾಂಧಿಗೆ ಗುಂಡು ಹೊಡೆಯಲು ಹೊರಟವನು ನಾಥರಾಮನ ತಮ್ಮ ಗೋಪಾಲ ಗೋಡ್ಸೆ. ಅತ್ಯಂತ ಪ್ರಾಮಾಣಿಕ ಮನುಷ್ಯನಾಗಿದ್ದ ಗೋಪಾಲ ಕೂಡ ಭಾರತೀಯ ಸೇನೆಯಲ್ಲಿದ್ದ. ಇವರೊಂದಿಗೆ ಇನ್ನೂ ನಾಲ್ವರಿದ್ದರು. ಎಲ್ಲ ಸೇರಿಕೊಂಡು ಗಾಂಧಿಯನ್ನು ಕೊಂದು ಹಾಕಿದರು.
ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳು ಬಂದಿವೆ. ನೀವೂ ಓದಿರಬಹುದು. ಆದರೆ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಕೃತಿಗೆ ಸಮ ಇನ್ನೊಂದಿಲ್ಲ. ಅಲ್ಲದೆ ತೀರ ಅಪರೂಪವೆನ್ನಿಸುವ ಫೋಟೋಗಳಿವೆ. ಓದುವ ಸಂತಸ ನಿಮ್ಮದಾಗಲಿ.
-ರವಿ ಬೆಳಗೆರೆ
Share


Subscribe to our emails
Subscribe to our mailing list for insider news, product launches, and more.