R. B. Basavaraja
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
- Free Shipping Above ₹200
- Cash on Delivery (COD) Available
Pages - 120
Type - Paperback
ವಿಜ್ಞಾನ ಕೇವಲ ಒಂದು ಪಠ್ಯ ವಿಷಯವಲ್ಲ. ಅದು ನಮ್ಮೊಳಗಿನ ಜ್ಞಾನ. ನಿತ್ಯವೂ ಕಾಡುವ ಕೌತುಕಗಳನ್ನು ತಿಳಿಯುವ ಪ್ರಯತ್ನ ಮಾಡಿದಾಗ ಅನೇಕ ವೈಜ್ಞಾನಿಕ ಸತ್ಯಗಳು ಗೋಚರಿಸುತ್ತವೆ. ವಿಜ್ಞಾನದ ಸತ್ಯಗಳು ನಮ್ಮ ಜ್ಞಾನವನ್ನು ವಿಸ್ತರಿಸುತ್ತವೆ.
ನಾವು ಈ ಭೂಮಿಗೆ ಬಂದ ದಿನದಿಂದ ನಮ್ಮ ಪಂಚೇಂದ್ರಿಯಗಳನ್ನು ಬಳಸುತ್ತಿದ್ದೇವೆ. ಇವುಗಳ ಸಂವೇದನೆಯಿಂದ ನಮ್ಮ ಪರಿಸರದಲ್ಲಿ ನ ಆಗುಹೋಗುಗಳನ್ನು ಗ್ರಹಿಸುತ್ತೇವೆ. ಈ ಗ್ರಹಿಕೆಯ ಮಾರ್ಗದಲ್ಲಿ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಪಂಚೇಂದ್ರಿಯಗಳಿಂದ ಬಂದ ಪ್ರಶ್ನೆಗಳನ್ನು ಅವಲೋಕಿಸಿ, ಉತ್ತರವನ್ನು ಪಡೆದು, ಉತ್ತರವನ್ನು ಹಿಂದಿನ ಕಲಿಕೆಯ ಅನುಭವಕ್ಕೆ ಹೋಲಿಸಿ, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ, ಪುನಃ ಹೊಸ ಕಲಿಕೆಯನ್ನು ಜ್ಞಾನವನ್ನಾಗಿಸಿಕೊಳ್ಳುವುದೇ ನಿತ್ಯದ ವಿಜ್ಞಾನ, ಪ್ರತಿ ಕಲಿಕೆಯು ವೈಜ್ಞಾನಿಕ ಮಾರ್ಗದಲ್ಲಿ ಚಲಿಸಿದಾಗ ವಿಜ್ಞಾನದ ಕೌತುಕಗಳ ಅಂತರಾಳ ಅರ್ಥವಾಗುತ್ತದೆ.
ವಿಜ್ಞಾನದ ಅಂತರಾಳ ತಿಳಿಯಲು ಪ್ರಶ್ನೆಗಳೇ ಮೂಲ ಬೇರುಗಳು. ಪ್ರಶ್ನೆಗಳಿಲ್ಲದ ಮನಸ್ಸು ಬೇರುಗಳಿಲ್ಲದ ಸಸ್ಯದಂತೆ, ನಿತ್ಯದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗಲೇ ಜ್ಞಾನ ಜೀವಂತಿಕೆ ಪಡೆಯುತ್ತದೆ. ಅಂತಹ ಜ್ಞಾನ ಭವಿಷ್ಯಕ್ಕೆ ಬೆಳಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕ ಜ್ಞಾನದ ಜೀವಂತಿಕೆಯಾಗಬಲ್ಲದು.
-ಆರ್.ಬಿ.ಗುರುಬಸವರಾಜ
ನಾವು ಈ ಭೂಮಿಗೆ ಬಂದ ದಿನದಿಂದ ನಮ್ಮ ಪಂಚೇಂದ್ರಿಯಗಳನ್ನು ಬಳಸುತ್ತಿದ್ದೇವೆ. ಇವುಗಳ ಸಂವೇದನೆಯಿಂದ ನಮ್ಮ ಪರಿಸರದಲ್ಲಿ ನ ಆಗುಹೋಗುಗಳನ್ನು ಗ್ರಹಿಸುತ್ತೇವೆ. ಈ ಗ್ರಹಿಕೆಯ ಮಾರ್ಗದಲ್ಲಿ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಪಂಚೇಂದ್ರಿಯಗಳಿಂದ ಬಂದ ಪ್ರಶ್ನೆಗಳನ್ನು ಅವಲೋಕಿಸಿ, ಉತ್ತರವನ್ನು ಪಡೆದು, ಉತ್ತರವನ್ನು ಹಿಂದಿನ ಕಲಿಕೆಯ ಅನುಭವಕ್ಕೆ ಹೋಲಿಸಿ, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ, ಪುನಃ ಹೊಸ ಕಲಿಕೆಯನ್ನು ಜ್ಞಾನವನ್ನಾಗಿಸಿಕೊಳ್ಳುವುದೇ ನಿತ್ಯದ ವಿಜ್ಞಾನ, ಪ್ರತಿ ಕಲಿಕೆಯು ವೈಜ್ಞಾನಿಕ ಮಾರ್ಗದಲ್ಲಿ ಚಲಿಸಿದಾಗ ವಿಜ್ಞಾನದ ಕೌತುಕಗಳ ಅಂತರಾಳ ಅರ್ಥವಾಗುತ್ತದೆ.
ವಿಜ್ಞಾನದ ಅಂತರಾಳ ತಿಳಿಯಲು ಪ್ರಶ್ನೆಗಳೇ ಮೂಲ ಬೇರುಗಳು. ಪ್ರಶ್ನೆಗಳಿಲ್ಲದ ಮನಸ್ಸು ಬೇರುಗಳಿಲ್ಲದ ಸಸ್ಯದಂತೆ, ನಿತ್ಯದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗಲೇ ಜ್ಞಾನ ಜೀವಂತಿಕೆ ಪಡೆಯುತ್ತದೆ. ಅಂತಹ ಜ್ಞಾನ ಭವಿಷ್ಯಕ್ಕೆ ಬೆಳಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕ ಜ್ಞಾನದ ಜೀವಂತಿಕೆಯಾಗಬಲ್ಲದು.
-ಆರ್.ಬಿ.ಗುರುಬಸವರಾಜ