{"product_id":"yashodhara-charite-poems-h-s-venkatesha-murthy-kannada-book","title":"ಯಶೋಧರ ಚರಿತೆ","description":"\u003cp\u003e ಯಶೋಧರ ಚರಿತೆಯ ಮಹತ್ವ ಅದರ ಕಸಬುಗಾರಿಕೆಯಲ್ಲಿದೆ. ಜನ್ನನ ರೂಪಕ, ಉಪಮಾನಗಳು ಹೊಸಬಗೆಯವಾಗಿವೆ. ಆಡುಮಾತಿನ ಒಗರು ಕಾವ್ಯದ ಉದ್ದಕ್ಕೂ ಕಂಡುಬರುತ್ತದೆ. ಬಹುಪಾಲು ಕಂದಪದ್ಯಗಳನ್ನೇ ಬಳಸಿ ಕಾವ್ಯ ಕಟ್ಟಿರುವ ಜನ್ನನ ನಿರ್ಮಿತಿಯ ಕಲೆಗಾರಿಕೆಯನ್ನೂ ಮೆಚ್ಚಲೇಬೇಕು. ಅದು ಗಿರಡ್ಡಿ ಹೇಳುವಂತೆ ಪ್ರಚಾರದ ಹಠವನ್ನು ಬಿಟ್ಟುಕೊಟ್ಟಿದ್ದರೆ, ಪಾತ್ರಗಳು ಸ್ವತಂತ್ರವಾಗಿ ಅರಳಲು ಕವಿಯು  ಕಣ್ಪಟ್ಟಿಗಳನ್ನು ಸಡಿಲಿಸಿದ್ದರೆ, ಕಾವ್ಯದ ದುರಂತ ಪಕ್ವತೆಯ ನೆಲೆಯಲ್ಲಿ ಓದುಗರ ಅಂತರಂಗವನ್ನು ತಲ್ಲಣಗೊಳಿಸಬಹುದಿತ್ತು. ಜನ್ನನಿಗೆ ಅದ್ಭುತವಾದ ಕಥನಶಕ್ತಿಯುಂಟು. ಅವನ ಕಲೆಗಾರಿಕೆಯೂ ಮೇಲ್ಮಟ್ಟದ್ದು. ಈ ಕಾವ್ಯದ ದೊಡ್ಡ ಸಮಸ್ಯೆ ಕಲೆಯ ಸ್ವಾಯತ್ತೆಯನ್ನು ಅದು ಮಾನ್ಯ ಮಾಡದೆ ಇರುವುದು.\u003c\/p\u003e\n\u003cp\u003e-ಪ್ರಸ್ತಾವನೆಯಿಂದ   \u003c\/p\u003e","brand":"H. S. Venkatesha Murthy","offers":[{"title":"Default Title","offer_id":47608953602307,"sku":"HB0000550255","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/yashodhara.jpg?v=1767856809","url":"https:\/\/harivubooks.com\/products\/yashodhara-charite-poems-h-s-venkatesha-murthy-kannada-book","provider":"Harivu Books","version":"1.0","type":"link"}