{"product_id":"vaagartha-articles-kirtinath-kurtakoti-kannada-book","title":"ವಾಗರ್ಥ","description":"\u003cp\u003e'ಬೇಂದ್ರೆಯವರಿಗೆ ಕಾವ್ಯರಚನೆ ಉಸಿರಾಟದಷ್ಟು ಸಹಜವಾಗಿತ್ತು. ಕಾವ್ಯಾನುಸಂಧಾನ ಕುರ್ತಕೋಟಿಯವರಿಗೆ ಉಸಿರಾಟದಷ್ಟೇ ಸಹಜವಾಗಿತ್ತು' ತಮ್ಮ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕೇಳಿದ ಬೇಂದ್ರೆಯವರ ಕಾವ್ಯ ವಾಚನ ಮತ್ತು ಅವರ ಮಾತುಗಳು ಕುರ್ತಕೋಟಿಯವರನ್ನು ಪೂರ್ತಿಯಾಗಿ ಆವರಿಸಿಬಿಟ್ಟವು. ಅಂದಿನಿಂದ ಬೇಂದ್ರೆಯವರ ಸಾಹಿತ್ಯ ವಿಶೇಷವಾಗಿ ಕಾವ್ಯದೊಂದಿಗೆ ಅವರ ಅನುಸಂಧಾನ ನಿರಂತರವಾಗಿ ನಡೆಯಿತು.\u003c\/p\u003e\n\u003cp\u003e'ಆಧುನಿಕ ಕನ್ನಡ ಕಾವ್ಯಪರಂಪರೆಯ ಬಗ್ಗೆ ಕಿರ್ತಿನಾಥ ಕುರ್ತಕೋಟಿಯವರದು ಮಹಾ ಪತಿವೃತಾ ಪ್ರತಿಭೆ' ಕುರ್ತಕೋಟಿಯವರ ವಿಮರ್ಶಾ ಪ್ರತಿಭೆ ಬೇಂದ್ರೆಯವರ ಕಾವ್ಯದ ಸೆಲೆಯನ್ನು ಅನ್ಯಾದೃಶವಾಗಿ, ಅದ್ಭುತವಾಗಿ ಮಾಡಿದೆ. ಕುರ್ತಕೋಟಿ ಅವರಿಂದ ಬೇಂದ್ರೆ ಕಾವ್ಯ ವಾಚನ, ವಿಶ್ಲೇಷಣೆ. ಹಿಂದೂಸ್ತಾನಿ ಸಂಗೀತದ ಆಲಾಪದಂತೆ ವಿಸ್ತಾರಗೊಳ್ಳುತ್ತ ಹೋಗುತ್ತಿತ್ತು. ಅದು ಅಲೌಕಿಕವಾದ ಆನಂದವನ್ನುಂಟು ಮಾಡುತ್ತಿತ್ತು. ಕುರ್ತಕೋಟಿ ಅವರ ಸಾಂಗತ್ಯ ಅನೇಕರನ್ನು ಬೇಂದ್ರೆ ಅಭ್ಯಾಸಿಗಳನ್ನಾಗಿಸಿತು.\u003c\/p\u003e\n\u003cp\u003eಬೇಂದ್ರೆಯವರ 'ವಾಕ್' ಗೆ 'ಅರ್ಥ' ಸ್ವರೂಪವನ್ನು ಶಾಸ್ತ್ರೀಯ ರೀತಿಯಲ್ಲಿ ಕೊಟ್ಟವರು. ಕುರ್ತಕೋಟಿಯವರು. ಈ ನಾಡಿನಲ್ಲಿ ಬೇಂದ್ರೆ ಸಾಹಿತ್ಯ ಕುರಿತು ವಿಮರ್ಶೆಯನ್ನು ಕುರ್ತಕೋಟಿ ಗೌಡರು ಬರೆದಷ್ಟು ಯಾರೂ ಬರೆದಿಲ್ಲ ಎನ್ನುವುದನ್ನು ಈ ಕೃತಿ 'ವಾಗರ್ಥ' ನಿರೂಪಿಸುತ್ತದೆ.\u003c\/p\u003e\n\u003cp\u003eತಮ್ಮ ಕೊನೆಯುಸಿರಿನವರೆಗೆ ಕುಮಾರವ್ಯಾಸ ಮತ್ತು ಬೇಂದ್ರೆ ಸಾಹಿತ್ಯದ ಅಧ್ಯಯನ ಮತ್ತು ಬರವಣಿಗೆಯನ್ನು ಒಂದು 'ನೋಂಪಿ'ಯಂತೆ ಪರಿಪಾಲಿಸಿದವರು ಕೀರ್ತಿನಾಥ ಕುರ್ತಕೋಟಿ ಅವರು.ಜೀವನದುದ್ದಕ್ಕೂ ಬೇಂದ್ರೆಯವರನ್ನು ಕುರಿತು ಬರೆದ ಎಲ್ಲಾ ಕೃತಿಗಳು ಹಾಗೂ ಲೇಖನಗಳು 'ವಾಗರ್ಥ' ಹೊತ್ತಿಗೆಯಲ್ಲಿವೆ.\u003c\/p\u003e\n\u003cp\u003eಮನೋಹರ ಗ್ರಂಥಮಾಲೆ ಕನ್ನಡಕ್ಕೆ ಇಂಥದೊಂದು ಅಪರೂಪದ ಕೃತಿಯನ್ನು ಓದುಗರಿಗೆ ಉಡುಗೊರೆಯಾಗಿ ನೀಡುತ್ತಿದೆ. \u003c\/p\u003e","brand":"Keerthinatha Kurtakoti","offers":[{"title":"Default Title","offer_id":47600178299139,"sku":"HB0000550185","price":1200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Vaagartha.jpg?v=1767619096","url":"https:\/\/harivubooks.com\/products\/vaagartha-articles-kirtinath-kurtakoti-kannada-book","provider":"Harivu Books","version":"1.0","type":"link"}