{"product_id":"kiragoorina-gayyaligalu-kannada-book","title":"ಪೂರ್ಣಚಂದ್ರ ತೇಜಸ್ವಿಯವರ - ಕಿರಗೂರಿನ ಗಯ್ಯಾಳಿಗಳು","description":"ಕಿರಗೂರಿನ ಗಯ್ಯಾಳಿಗಳು' ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಾದಂಬರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೇಲಿನ ಕಾದಂಬರಿಯನ್ನು ಲೇಖಕ ಅ. ನಾ. ರಾವ್ ಜಾದವ್ ನಾಟಕವಾಗಿ ರೂಪಾಂತರಿಸಿ ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಗ್ರಾಮಸೇವಕ ಶಂಕರಪ್ಪನಿಂದ ಹಿಡಿದು ಮಾರ, ಸಿದ್ಧ, ದಾನಮ್ಮ, ಸುಬ್ಬಯ್ಯ, ಸೀಗೇಗೌಡ, ಬೈರಪ್ಪ, ಕಾಳೇಗೌಡ – ಇತ್ಯಾದಿ, ತಮ್ಮದೇ ತಾಪತ್ರಯಗಳಲ್ಲಿ ಸಿಕ್ಕಿ ಒದ್ದಾಡುವ ಕಿರಗೂರಿನ ಜನರ ಜೊತೆಗೆ, ಹಗರಣಕ್ಕೆ ಕಾರಣವಾಗುವ ಹೆಬ್ಬಲಸಿನ ಮರವನ್ನೂ ರಂಗದ ಬೆಳಕಿಗೊಡ್ಡಿದ್ದಾರೆ. \u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅ. ನಾ. \u003c\/span\u003eರಾವ್ ಜಾದವ್ ಹಲವು ವರ್ಷಗಳಿಂದ ರಂಗಕರ್ಮಿಯಾಗಿ ಪರಿಚಿತರು. ನಾಟಕ ರಚನೆ, ನಿರ್ದೇಶನ, ಅಭಿನಯ ಇವರ ಆಸಕ್ತಿಯ ಕ್ಷೇತ್ರಗಳು, ಹವ್ಯಾಸಿ ಮತ್ತು ಕೈಗಾರಿಕಾ ಕಾರ್ಮಿಕ ರಂಗದಲ್ಲಿ ಹಲವು ನಾಟಕಗಳನ್ನು ನಿರ್ದೆಶಿಸಿದ್ದಾರೆ. ರೇಡಿಯೋ ನಾಟಕಗಳಲ್ಲಿ, ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಸ್ಥಿರ ಛಾಯಾಗ್ರಾಹಕರಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಹವ್ಯಾಸಿ ಪತ್ರಕರ್ತ. ಇವರ ಹಲವು ಚಿತ್ರಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತೇಜಸ್ವಿಯವರ 'ಕರ್ವಾಲೊ' ಮತ್ತು 'ಪರಿಸರದ ಕಥೆ' ಕೃತಿಗಳನ್ನು ಕೂಡಾ ಅ. ನಾ. ರಾವ್ ಜಾದವ್ ನಾಟಕವಾಗಿ ರೂಪಾಂತರಿಸಿದ್ದಾರೆ.\u003cbr data-mce-fragment=\"1\"\u003e","brand":"A. N. Rao Jadav","offers":[{"title":"Default Title","offer_id":42372107829507,"sku":"HB00002155","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a3d705ab-5863-4374-ba23-e3a03d13a272.jpg?v=1642750902","url":"https:\/\/harivubooks.com\/products\/kiragoorina-gayyaligalu-kannada-book","provider":"Harivu Books","version":"1.0","type":"link"}