{"product_id":"karnatakada-janateya-samskruti-history-kannada-books","title":"ಕರ್ನಾಟಕದ ಜನತೆಯ ಸಂಸ್ಕೃತಿ","description":"ಮುನ್ನುಡಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಸರ್. ಆರ್. ವೆಂಕಟರತ್ನಂ. ನಾಯುಡು ಅವರು ಮದ್ರಾಸಿನ ವಿಶ್ವವಿದ್ಯಾಲಯದ ವೈಸ್-ಛಾನ್ಸಲರ್ ಪದವಿಯಲ್ಲಿದ್ದಾರೆ. ಆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ದ್ರಾವಿಡ ದೇಶದ ಸಂಸ್ಕೃತಿಯನ್ನು ಕುರಿತು ಕೆಲವು ಉಪನ್ಯಾಸಗಳು ನಡೆಯುವಂತೆ ಏರ್ಪಾಡು ಮಾಡಿದರು. ಆ ಸಂದರ್ಭದಲ್ಲಿ ಕರ್ಣಾಟಕ ಶಾಖೆಯಲ್ಲಿ ಉಪನ್ಯಾಸ ಮಾಡುವ ಪುಣ್ಯವು ನನ್ನ ಪಾಲಿಗೆ ಬಂತು, ಕರ್ಣಾಟಕದ ಜನತೆಯ ಸಂಸ್ಕೃತಿಯನ್ನು ಕುರಿತ ಈ ಉಪನ್ಯಾಸವು ಆಗ ನಾನು ಮದ್ರಾಸಿನಲ್ಲಿ ಮಾಡಿದ ನಾಲ್ಕು ಭಾಷಣಗಳ ಸಾರಾಂಶ, ಅವಶ್ಯಕವೆಂದು ತೋರಿದ ಎರಡು ಕಡೆ ಈಚೆಗೆ ಕಂಡ ವಿಷಯದ ಪ್ರಸ್ತಾಪ ಮಾಡಿದ್ದೇನೆ. ಈ ಉಪನ್ಯಾಸದಲ್ಲಿ ಬೇರೆ ಬೇರೆ ಮತಗಳ ಮೇಲೆ ಕೀಳಿಗಳನ್ನು ತೋರಿಸಲು ಉದ್ದೇಶಿಸಿದ್ದೇನೆಂದು ಯಾರೂ ಭಾವಿಸಬಾರದು. ಕುಂದು ಕೊರತೆಗಳ ಮಾತನ್ನಾಡುವಾಗ ನನ್ನ ದೃಷ್ಟಿ ವಿಷಯದ ಮೇಲೆ ಇದ್ದಿದೆಯೇ ಹೊರತು ವ್ಯಕ್ತಿ ಅಥವಾ ಜಾತಿಗಳ ಮೇಲೆ ಹೋಗಿಲ್ಲ. ಮುಖ್ಯವಾಗಿ ನಮ್ಮ ಜನ ಮುಂದುವರಿಯಬೇಕಾದರೆ ನಮ್ಮ ಈಗಣ ಸ್ಥಿತಿಯನ್ನು ಕುರಿತ ವಿಚಾರ ಅವಶ್ಯ. ಈ ವಿಚಾರದ ವಿಷಯವನ್ನು ಸಂಕ್ಷೇಪವಾಗಿ ಸೂಚಿಸುವುದು ಇಲ್ಲಿಯ ಉದ್ದೇಶ, ಈ ಉಪನ್ಯಾಸಗಳನ್ನು ಏರ್ಪಡಿಸಿದ್ದಕ್ಕಾಗಿ ಸರ್. ಆರ್. ವೆಂಕಟರತ್ನಂ ನಾಯುಡು ಅವರಿಗೂ ಉಪನ್ಯಾಸ ಮಾಡುವ ಮರ್ಯಾದೆಯನ್ನು ನನಗೆ ತೋರಿದ್ದಕ್ಕಾಗಿ ಮದ್ರಾಸು ವಿಶ್ವವಿದ್ಯಾಲಯದ ನನ್ನ ಮಿತ್ರರಿಗೂ, ಭಾಷಣಗಳ ಕಾಲದಲ್ಲಿ ವ್ಯಕ್ತಪಡಿಸಿದ ವಂದನೆಯನ್ನು ನಾನು ಈಗ ಮರಳಿ ಸೂಚಿಸುತ್ತೇನೆ. ಈ ಉಪನ್ಯಾಸವು ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾಗುತ್ತಿದೆ. ಇದಕ್ಕೆ ಅದರಲ್ಲಿ ಅವಕಾಶವನ್ನು ಕೊಟ್ಟದ್ದಕ್ಕಾಗಿ ನಾನು ಆ ಪತ್ರಿಕೆಯ ಕರ್ತರಿಗೆ ಕೃತಜ್ಞನಾಗಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಮಾಸ್ತಿ ವೆಂಕಟೇಶ ಅಯ್ಯಂಗಾರ್\n\u003cdiv id=\"gtx-trans\" style=\"position: absolute; left: -27px; top: 27.6667px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Maasti Venkatesha Iyyangar","offers":[{"title":"Default Title","offer_id":43623913062659,"sku":"HB00003853","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_53910b79-ae2c-4ad9-9bf8-b21600423342.jpg?v=1672057152","url":"https:\/\/harivubooks.com\/products\/karnatakada-janateya-samskruti-history-kannada-books","provider":"Harivu Books","version":"1.0","type":"link"}