{"product_id":"harihara-kaviya-nambiyannana-ragale-collection-of-poems-kannada-book","title":"ಹರಿಹರ ಕವಿಯ ನಂಬಿಯಣ್ಣನ ರಗಳೆ","description":"\u003cp\u003eಆಚಾರ್ಯ ಕೃತಿ 'ಭಾರತೀಯ ಕಾವ್ಯಮೀಮಾಂಸೆ', 'ಸಮಾಲೋಕನ', 'ಕನ್ನಡ ಮಧ್ಯಮ ವ್ಯಾಕರಣ', 'ಕಾವ್ಯ ಸಮೀಕ್ಷೆ', 'ನಂಟರು', 'ಒಲುಮೆ' ಮೊದಲಾದ ಹಲವಾರು ಮೌಲಿಕ ಕೃತಿಗಳ ಮೂಲಕ ಕನ್ನಡ ವಿದ್ವತ್ತು, ವಿಮರ್ಶೆ, ಗ್ರಂಥ ಸಂಪಾದನೆ, ಭಾಷಾ ಶಾಸ್ತ್ರ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿ ಚಿರನೆನಪಿನಲ್ಲಿರುವವರು ಪ್ರೊ. ತೀ.ನಂ. ಶ್ರೀಕಂಠಯ್ಯನವರು, ಅವರು 'ಕಾವ್ಯಮೀಮಾಂಸೆ' ಕ್ಷೇತ್ರದಲ್ಲಿ ಆಧುನಿಕ ಆಚಾರ್ಯ ಅಭಿನವ ಗುಪ್ತ ಎಂದು ಪ್ರಸಿದ್ದರಾಗಿದ್ದಾರೆ.\u003c\/p\u003e\n\u003cp\u003eತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ ಗ್ರಾಮದಲ್ಲಿ ಜನಿಸಿದ ತೀ.ನಂ.ಶ್ರೀ.ಯವರು ತೆಂಗಿನ ಸೀಮೆಗೆ ಸೇರಿದವರು. ತೆಂಗಿನ ಮರ ನೆಲದೊಳಗೆ ಬೇರು ಚಾಚಿ ಎತ್ತರದಲ್ಲಿ ಗರಿಬಿಚ್ಚಿ ಗೊನೆಗೊನೆ ಕಾಯಿಗಳನ್ನು ಹೊತ್ತು ನೆಟ್ಟಗೆ ನಿಲ್ಲುವಂಥದು. ಪಾಂಡಿತ್ಯದ ಹಲವು ನೆಲೆಗಳಲ್ಲಿ ಬೇರೂರಿ ಪ್ರತಿಭೆಯ ಗರಿಬಿಚ್ಚಿನಿಂತ ತೀ.ನಂ.ಶ್ರೀ.ಯವರ ವ್ಯಕ್ತಿತ್ವ ಈ ತೆಂಗಿನ ಮರಗಳಿಗೆ ತಕ್ಕ ಪ್ರತೀಕವಾಗಿದೆ.\u003c\/p\u003e","brand":"Prof.T.N Sreekantaiya","offers":[{"title":"Default Title","offer_id":47829675016451,"sku":"HB00006722","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/nambiyanna.jpg?v=1773138448","url":"https:\/\/harivubooks.com\/products\/harihara-kaviya-nambiyannana-ragale-collection-of-poems-kannada-book","provider":"Harivu Books","version":"1.0","type":"link"}