G. S. Shivarudrappa
Publisher - ಸಪ್ನ ಬುಕ್ ಹೌಸ್
- Free Shipping
- Cash on Delivery (COD) Available
Pages -
Type -
Couldn't load pickup availability
ಕವಿಮನದ ನೆಲೆಯಲ್ಲಿ, ಸೌಂದರ್ಯ ಚಿಂತನೆಯಿಂದ ಯಾವ ಬೋಧದ ವಿವರವು ರೂಪುಗೊಂಡಿದೆ ಎಂಬುದನ್ನು ಈ ಪ್ರಬಂಧದಲ್ಲಿ ನೋಡಬಹುದು ಎಂದು ದ. ರಾ. ಬೇಂದ್ರೆ ಅವರು 'ಸೌಂದರ್ಯ ಸಮೀಕ್ಷೆ'ಯನ್ನು ಕುರಿತು ಹೇಳುತ್ತಾರೆ.
ಹಾಗಾಗಿ, ವಿದ್ವತ್ತಿಗೂ ತೀಕ್ಷ್ಣವಾದ ವಿಮರ್ಶನ ಶಕ್ತಿಯು ಲೇಖಕರದ್ದಾಗಿದೆ. ಈ ಕೃತಿ ಈಚಿನ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ಶಾಸ್ತ್ರದ ತೌಲನಿಕ ಅಧ್ಯಯನ ಶಾಖೆಗೆ ಒಂದು ಮಹತ್ತರವಾದ ಕೊಡುಗೆ. ಈ ಕೃತಿ ರಚನೆಯ ಹಿಂದೆ ಇರುವ ಸಂಸ್ಕೃತ, ಇಂಗ್ಲಿಷ್-ಆಧಾರ ಗ್ರಂಥಗಳ ಅಳವಾದ ಅಭ್ಯಾಸ, ಮನನ, ವಿವೇಚನೆ, ಪಾಶ್ಚಾತ್ಯ ಭಾರತೀಯ ಕಾವ್ಯ ಪರಿಕಲ್ಪನೆಗಳ ನಿರ್ದಿಷ್ಟವಾದ ಗ್ರಹಿಕೆ ಮೆಚ್ಚುವಂತದ್ದು. ವಿಮರ್ಶೆಯ ಕೆಲವು ಮೂಲತತ್ವಗಳನ್ನು ಕುರಿತಾದ ಪುಸ್ತಕ ಇದು. ಸಾಹಿತ್ಯದಲ್ಲಿ ತಕ್ಕಷ್ಟು ಅಭಿರುಚಿಯುಳ್ಳ ಸಹೃದಯರಿಗೆ ಇದರಿಂದ ಕೊಂಚ ಮಟ್ಟಿಗೆ ಉಪಯೋಗವಾಗಬಹುದು.
