{"title":"Buy 4 Books And Get 1 Books Free","description":"\u003cdiv style=\"text-align: left;\"\u003e\n\u003cpre class=\"tw-data-text tw-text-large tw-ta\" data-placeholder=\"Translation\" id=\"tw-target-text\" role=\"text\" data-ved=\"2ahUKEwje7LmE0L6QAxWJ3TgGHeI2CGoQ3ewLegQIDBAV\" dir=\"ltr\" aria-label=\"Translated text: Buy 4 books, get 1 free!\nChoose five books of your choice, and one of them will be free!\n*Use code HB_FREE at checkout\n*You must choose at least five books to receive this offer\n* This offer is only valid until January 15th!\" tabindex=\"-1\"\u003e\u003cspan class=\"Y2IQFc\" lang=\"en\"\u003eBuy 4 books, get 1 free!\nChoose five books of your choice, and one of them will be free!\n*Use code HB_FREE at checkout\n*You must choose at least five books to receive this offer\n* This offer is only valid until January 15th!\u003c\/span\u003e\u003c\/pre\u003e\n\u003c\/div\u003e","products":[{"product_id":"pracheena-bharathavemba-adbhuta","title":"ಪ್ರಾಚೀನ ಭಾರತವೆಂಬ ಅದ್ಭುತ","description":"\u003cp\u003e\u003c\/p\u003e","brand":"D. R. Mirji","offers":[{"title":"Default Title","offer_id":42020604215555,"sku":"HB00001874","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3d48e711-9597-4705-861a-0f7514a2234e.jpg?v=1636356209"},{"product_id":"kaadu-mattu-krourya-novel-k-p-poornachandra-tejaswi-kannada-book","title":"ಕಾಡು ಮತ್ತು ಕ್ರೌರ‍್ಯ","description":"\u003cp\u003e'ಕಾಡು ಮತ್ತು ಕ್ರೌರ್ಯ' ಪ್ರಕೃತಿ, ಅರಣ್ಯ ಮತ್ತು ಪ್ರಾಣಿ ಜಗತ್ತಿನ ಬಗ್ಗೆ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ ಅತ್ಯಂತ ರೋಮಾಂಚಕ ಹಾಗೂ ಚಿಂತನೆಗೆ ಹಚ್ಚುವ ಕೃತಿಯಾಗಿದೆ. ಪ್ರಸಿದ್ಧ ಜಂಗಲ್ ಸಾಹಸಿ ಕೆನ್ನೆತ್ ಆಂಡರ್ಸನ್ ಅವರ ಕಾಡಿನ ನೈಜ ಅನುಭವಗಳನ್ನು ಆಧರಿಸಿ, ತೇಜಸ್ವಿ ಅವರು ತಮ್ಮದೇ ಆದ ವಿಶಿಷ್ಟ ಸಾಹಿತ್ಯಿಕ ಶೈಲಿಯಲ್ಲಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಮೇಲ್ನೋಟಕ್ಕೆ ಇದು ಕಾಡುಪ್ರಾಣಿಗಳ ಬೇಟೆಯ ಕಥೆಯಂತೆ ಕಂಡರೂ, ಇದರ ಆಳದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಜಟಿಲ ಸಂಬಂಧದ ವಿಶ್ಲೇಷಣೆ ಇದೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020610310403,"sku":"HB00001792","price":132.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_0035555.jpg?v=1636356358"},{"product_id":"aatmashreegaagi-nirankusha-matigalaagi-essays-kuvempu-kannada-book","title":"ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ","description":"\u003cp\u003e\u003cspan\u003eಯುವಜನರಲ್ಲಿ ಅಧ್ಯಾತ್ಮ, ವೈಜ್ಞಾನಿಕ ದೃಷ್ಟಿ, ಮತ್ತು ವಿಚಾರ ಬುದ್ಧಿಗಳನ್ನು ಪ್ರಚೋದಿಸುವ ಕುವೆಂಪು ಅವರ 4 ಪ್ರಬಂಧಗಳ ಸಂಕಲನ.\u003c\/span\u003e\u003c\/p\u003e","brand":"Kuvempu","offers":[{"title":"Default Title","offer_id":42020610769155,"sku":"HB00001785","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_0001_0001_430d860f-8fac-4991-b260-5c1bc7c613f9.jpg?v=1636356371"},{"product_id":"huli-patrike-2-novel","title":"ಹುಲಿ ಪತ್ರಿಕೆ ೨","description":"\u003cp\u003eರೋಚಕವಾದ ಥ್ರಿಲ್ಲರ್ ಕಾದಂಬರಿಗೆ ಹೆಸರಾದ ಯುವ ಬರಹಗಾರ ಅನುಷ್ ಎ. ಶೆಟ್ಟಿಯವರ ಮತ್ತೊಂದು ಥ್ರಿಲ್ಲರ್ ಕಾದಂಬರಿ 'ಹುಲಿ ಪತ್ರಿಕೆ ೨'. ಪ್ರತಿ ಪುಟದಲ್ಲೂ ಇಣುಕುವ ರೋಚಕತೆಗೆ ನೀವು ಸಾಕ್ಷಿಯಾಗುವಿರಿ.\u003c\/p\u003e","brand":"Anush A. Shetty","offers":[{"title":"Default Title","offer_id":42020613980419,"sku":"HB00001752","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-07-01at11.29.28AM.jpg?v=1636356436"},{"product_id":"kshana-hottu-hani-muttu-bhaga-1","title":"ಕ್ಷಣ ಹೊತ್ತು ಆಣಿ ಮುತ್ತು ಭಾಗ 1- 11","description":"","brand":"S. Shadakshari","offers":[{"title":"Default Title","offer_id":42020614799619,"sku":"HB00001741","price":1430.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kshanahottuhanimuttu.jpg?v=1636356457"},{"product_id":"gireikandara-estate","title":"ಗಿರಿಕಂದರ ಎಸ್ಟೇಟ್","description":"","brand":"Girimane Shyamarao","offers":[{"title":"Default Title","offer_id":42020618928387,"sku":"HB00001684","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/girikandaraestate.jpg?v=1636356557"},{"product_id":"makkalodane-aata-paata-odanaata","title":"ಮಕ್ಕಳೊಡನೆ ಆಟ-ಪಾಠ, ಒಡನಾಟ","description":"\u003cp\u003eಗಿರಿಮಾನೆ ಶ್ಯಾಮರ ಬರೆದ ಈ ಕನ್ನಡ ಪುಸ್ತಕವು ಮಕ್ಕಳೊಡನೆ ಗುಣಮಾನದ ಸಮಯ ಕಳೆಯುವ ಅನೇಕ ಮಾರ್ಗಗಳನ್ನು ನೀಡುತ್ತದೆ. \"ಮಕ್ಕಳೊಡನೆ ಆಟ-ಪಾಠ, ಒಡನಾಟ\" ಆಟ, ಸಂಗೀತ, ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಬೆಳವಣಿಗೆಯನ್ನು ಪೋಷಿಸುತ್ತದೆ. ಪ್ರತಿದಿನದ ಕ್ಷಣಗಳನ್ನು ಅರ್ಥಪೂರ್ಣ ಸಂಪರ್ಕಗಳಾಗಿ ರೂಪಾಂತರಿಸಿ, ಆತ್ಮವಿಶ್ವಾಸ ಮತ್ತು ಭಾಷಾ ಕೌಶಲ್ಯ ನಿರ್ಮಾಣ ಮಾಡುತ್ತದೆ. ಪೋಷಕರು ಮತ್ತು ಶಿಕ್ಷಕರಿಗೆ ಆದರ್ಶ.\u003c\/p\u003e","brand":"Girimane Shyamarao","offers":[{"title":"Old","offer_id":47707723006211,"sku":"HB00001682","price":140.0,"currency_code":"INR","in_stock":true},{"title":"New","offer_id":47707723038979,"sku":"HB00001683E","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Makkalodane_Aata_Pata_odanata_-_02.jpg?v=1770370487"},{"product_id":"putaari-aane-put-put","title":"ಪುಟ್ಟಾರಿ ಆನೆ ಪುಟ್ ಪುಟ್","description":"","brand":"Anand Patil","offers":[{"title":"Default Title","offer_id":42020621877507,"sku":"HB00001648","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/puttaariaaneputput_0001.jpg?v=1636356628"},{"product_id":"channa-basava-nayaka","title":"ಚನ್ನಬಸವನಾಯಕ","description":"","brand":"Srinivasa","offers":[{"title":"Default Title","offer_id":42020624826627,"sku":"HB00001623","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/channabasavanayaka_0001.jpg?v=1636356677"},{"product_id":"narasaarvabhouma","title":"ನಟಸಾರ್ವಭೌಮ","description":"","brand":"Aa. Na. Kru.","offers":[{"title":"Default Title","offer_id":42020626563331,"sku":"HB00001608","price":600.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/natasaarvabhouma_0001.jpg?v=1636356710"},{"product_id":"horatada-haadi","title":"ಹೋರಾಟದ ಹಾದಿ","description":"\u003cp\u003e\u003c\/p\u003e","brand":"Dr. H. Narasimhaiah","offers":[{"title":"Default Title","offer_id":42020628463875,"sku":"HB00001582","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/horaatadahaadi_400rs_620gms_0001.jpg?v=1636356753"},{"product_id":"milenium-4-chandrana-chooru","title":"ಮಿಲನಿಯಮ್ - ೪ ಚಂದ್ರನ ಚೂರು","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020637704451,"sku":"HB00001448","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4029.jpg?v=1636356985"},{"product_id":"milenium-5-nerehoreya-geleyaru","title":"ಮಿಲನಿಯಮ್ - ೫ ನೆರೆಹೊರೆಯ ಗೆಳೆಯರು","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020637868291,"sku":"HB00001446","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4030.jpg?v=1636356989"},{"product_id":"milenium-9-deshavidesha-1","title":"ಮಿಲನಿಯಮ್ - ೯ ದೇಶವಿದೇಶ-೧","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020638097667,"sku":"HB00001443","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4033.jpg?v=1636356995"},{"product_id":"milenium-10-deshavidesha-2-articles-k-p-poornachandra-tejaswi-kannada-book","title":"ಮಿಲನಿಯಮ್ - ೧೦ ದೇಶವಿದೇಶ-೨","description":"\u003cp\u003e\u003cspan\u003eಮರಳುಗಾಡಿನ ಬಗ್ಗೆ ಜನಜನಿತವಾಗಿರುವ ದುರಭಿಪ್ರಾಯವೇ ನನ್ನಲ್ಲೂ ಇತ್ತು ಮನುಷ್ಯನಿಗೆ ಸವಾಲಾಗಿರುವ ಮರಳುಗಾಡುಗಳು ನಿರಾಸೆ, ಕಷ್ಟಕಾರ್ಪಣ್ಯ, ದುಃಖ ಮತ್ತು ಸಾವನ್ನು ಸಂಕೇತಿಸುತ್ತದೆಂದು ನಾನು ಭಾವಿಸಿದ್ದೆ. ಅದರಲ್ಲಿ ಕುತೂಹಲಕರವಾದುದು ಏನೂ ಇರಲು ಸಾಧ್ಯವಿಲ್ಲವೆಂದೇ ತಿಳಿದಿದ್ದೆ. ಆದರೆ ಜಗತ್ತಿನ ಆಗುಹೋಗುಗಳಲ್ಲಿ ಮರಳುಗಾಡು ವಹಿಸಿರುವ ಪಾತ್ರ ನೋಡಿ ನನಗೆ ಅಚ್ಚರಿಯಾಯ್ತು! ಜಗತ್ತಿನ ಅನೇಕ ಮಹಾ ಚಿಂತನೆಗಳು ಹುಟ್ಟಿರುವುದು ಮರಳುಗಾಡಿನಿಂದಲೇ. ಬಹುಪಾಲು ಇವತ್ತಿನ ಧರ್ಮಗಳೆಲ್ಲಾ ಹುಟ್ಟಿರುವುದು ಮರಳುಗಾಡಿನಿಂದಲೇ. ಜಗತ್ತಿನ ಬಹಳಷ್ಟು ಪ್ರಾಚೀನ ನಾಗರಿಕತೆಗಳ ಉಗಮವೆಲ್ಲಾ ಮರಳುಗಾಡಿನಿಂದಲೇ ವಿಕಾಸವಾಗಿವೆ. ಅಲ್ಲದೆ ಜಗತ್ತಿನ ಅಪ್ರತಿಮ ವೀರಾಗ್ರಣಿಗಳು, ದಂಡನಾಯಕರು, ಯು್ದ್ದಕುಶಲಿಗಳು ಮರಳುಗಾಡಿನಿಂದಲೇ ಬಂದು ಚರಿತ್ರೆ ನಿರ್ಮಿಸಿರುವುದನ್ನು ಕಾಣುತ್ತೇವೆ. ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ! ಅದರ ಮಹನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಅಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ!\u003c\/span\u003e\u003cbr\u003e\u003cbr\u003e\u003cspan\u003eಮರಳುಗಾಡಿನ ಗಾಂಭೀರ್ಯ, ಮಹಾ ವಿಸ್ತಾರ, ಜನವಿಹೀನ ಏಕಾಂತ ಅದಕ್ಕೊಂದು ವಿಚಿತ್ರ ಸೌಂದರ್ಯ ಮತ್ತು ಆಕರ್ಷಣೆಯನ್ನೀಯುತ್ತದೆ. ಈ ಕುರಿತ ನನ್ನ ಕುತೂಹಲ, ಅನ್ವೇಷಣೆಗಳ ಕೆಲವಷ್ಟನ್ನು ಇಲ್ಲಿ ನಿಮಗೆ ವಿವರಿಸಿದ್ದೇನೆ. ಒಂದಾನೊಂದು ಕಾಲದಲ್ಲಿ ಸಮೃದ್ಧ ಭೂಮಿಯಾಗಿದ್ದ ‘ಸಹರಾ’ ಅನಂತರ ಭೀಕರ ಮರಳುಗಾಡಾಗಿ ಪರಿವರ್ತನೆಯಾಗಿ ಈ ಪುಸ್ತಕದಾದ್ಯಂತ ವಿಸ್ತರಿಸಿರುವುದನ್ನು ಕಾಣುತ್ತೀರಿ.\u003c\/span\u003e\u003cbr\u003e\u003cbr\u003e\u003cspan\u003e- ಕೆ.ಪಿ.ಪೂರ್ಣಚಂದ್ರ ತೇಜಸ್ವಿ\u003c\/span\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020638195971,"sku":"HB00001442","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4021.jpg?v=1636356996"},{"product_id":"milenium-11-deshavidesha3","title":"ಮಿಲನಿಯಮ್ - ೧೧ ದೇಶವಿದೇಶ-೩","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020638228739,"sku":"HB00001441","price":96.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4022.jpg?v=1636356998"},{"product_id":"milenium-12-deshavidesha","title":"ಮಿಲನಿಯಮ್ - ೧೨ ದೇಶವಿದೇಶ-೪","description":"\u003cp\u003e\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020638327043,"sku":"HB00001440","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4066.jpg?v=1636356999"},{"product_id":"milenium-13-vismaya-vishwa-illustrated-articles-k-p-poornachandra-tejaswi-kannada-book","title":"ಮಿಲನಿಯಮ್ - ೧೩ ವಿಸ್ಮಯ ವಿಶ್ವ-೧","description":"\u003cp\u003e೨೧ನೆಯ ಶತಮಾನದ ಆರಂಭದಲ್ಲಿ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಓದುಗರಿಗಾಗಿ ಜಗತ್ತಿನ ಅದ್ಭುತ ಜ್ಞಾನವನ್ನು ಪರಿಚಯಿಸಲು ರೂಪಿಸಿದ ಪ್ರಸಿದ್ಧ ೧೬ ಸಂಪುಟಗಳ 'ಮಿಲನಿಯಮ್ ಸರಣಿ'ಯಲ್ಲಿ ಈ ಪುಸ್ತಕವು ೧೩ನೆಯ ಸಂಪುಟವಾಗಿದೆ. 'ವಿಸ್ಮಯ ವಿಶ್ವ - ೧' ಹೆಸರೇ ಸೂಚಿಸುವಂತೆ, ನಮ್ಮ ಕಣ್ಣಿಗೆ ಕಾಣುವ ಹಾಗೂ ಕಾಣದ ಈ ಬ್ರಹ್ಮಾಂಡದ, ವಿಜ್ಞಾನದ ಮತ್ತು ಪ್ರಕೃತಿಯ ಬೆರಗುಗೊಳಿಸುವ ರಹಸ್ಯಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ಈ ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020638392579,"sku":"HB00001439","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4023.jpg?v=1636357001"},{"product_id":"makkalannu-belesuvudu-hege","title":"ಮಕ್ಕಳನ್ನು ಬೆಳೆಸುವುದು ಹೇಗೆ?","description":"\u003cp\u003e'ಮಕ್ಕಳನ್ನು ಹೇಗೋ ಬೆಳೆಸುವ ಬದಲು 'ಹೀಗೂ ಬೆಳೆಸಬಹುದು' ಎನ್ನುವುದನ್ನು ಉದಾಹರಣೆಗಳ ಸಮೇತ ಲೇಖಕ ಶ್ರೀಯುತ ಗಿರಿಮನೆ ಶ್ಯಾಮರಾವ್ ಇಲ್ಲಿ ವಿವರಿಸಿದ್ದಾರೆ. ಇದರಲ್ಲಿ ಮಕ್ಕಳ ಅಭ್ಯುದಯಕ್ಕಾಗಿಯೇ ಬರೆದ ಅರವತ್ತೆರಡು ಅಧ್ಯಾಯಗಳಿವೆ. ಮಕ್ಕಳ ಬಗ್ಗೆ ಬರೆಯುವುದು ಸುಲಭವಲ್ಲ. ಆದರೆ ಇದರಲ್ಲಿ ಬರೆದ ಅಷ್ಟೂ ಅಧ್ಯಾಯಗಳ ಬಗ್ಗೆಯೂ ನನ್ನ ತಕರಾರಿಲ್ಲ. ಎಲ್ಲವೂ ಮಕ್ಕಳನ್ನು ಹೆತ್ತವರಿಗೆ ಅತ್ಯುಪಯುಕ್ತವಾದವುಗಳೇ. ಒಂದೇ ಸಲ ಓದಿ ಮುಗಿಸುವುದಕ್ಕಿಂತ ದಿನಕ್ಕೊಂದು ಅಧ್ಯಾಯದಂತೆ ಓದಿ ಮನನ ಮಾಡಿಕೊಳ್ಳುವುದು ಸೂಕ್ತ. ಮಕ್ಕಳಿಗೆ ಕತೆ ಯಾವ ರೀತಿ ಹೇಳಬಹುದು, ಕೆಲಸ ಹೇಗೆ ಕಲಿಸಬಹುದು, ಅವರ ತಪ್ಪುಗಳನ್ನು ಯಾವ ರೀತಿ ತಿದ್ದಿ ಅವರಿಗೆ ಒಳ್ಳೆಯದಾಗುವಂತೆ ಹೇಗೆ ನಡೆದುಕೊಳ್ಳಬಹುದು ಎಂಬ ಬೇರೆ ಬೇರೆ ವಿಷಯಗಳ ಬಗ್ಗೆ ಅತ್ಯಂತ ಸರಳ ಮತ್ತು ಸುಲಭವಾಗಿ ಉದಾಹರಣೆಗಳ ಸಮೇತ ಪ್ರತಿಯೊಂದು ಅಧ್ಯಾಯದಲ್ಲೂ ವಿವರಿಸಲಾಗಿದೆ. ಇಂದಿನ ಬದುಕಿನಲ್ಲಿ ಮಕ್ಕಳನ್ನು ಅರಿಯಲು ಹೆತ್ತವರಿಗೆ ತೀರಾ ಅವಶ್ಯವಾದ\u003c\/p\u003e","brand":"Girimane Shyamarao","offers":[{"title":"1st Edition","offer_id":47846739181827,"sku":"HB00001428","price":180.0,"currency_code":"INR","in_stock":false},{"title":"2nd Edition","offer_id":47846739214595,"sku":"HB00001429","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MakkalannuBelesuvuduhege.jpg?v=1746793871"},{"product_id":"manushyara-manasu-mattu-swabhaagalu","title":"ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-3","description":"\u003cp\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020639539459,"sku":"HB00001423","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4000.jpg?v=1636357024"},{"product_id":"manushyara-manassu-mattu-swabhaavagalu-2","title":"ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-2","description":"\u003cp\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020639604995,"sku":"HB00001422","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3999.jpg?v=1636357026"},{"product_id":"maatu-hegiddare-chenna","title":"ಮಾತು ಹೇಗಿದ್ದರೆ ಚೆನ್ನ?","description":"\u003cp\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020640293123,"sku":"HB00001416","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4016.jpg?v=1636357034"},{"product_id":"huli-patrikre","title":"ಹುಲಿ ಪತ್ರಿಕೆ ೧","description":"\u003cspan\u003eಇದೊಂದು ಹುಡುಕಾಟದ ಕಥೆ.\u003c\/span\u003e\u003cbr\u003e\u003cspan\u003eಕಾಡಿನಲ್ಲಿ ಮರೆಯಾದ ಸುಮಂತ , ನೇರ ನೇರ ಸುದ್ದಿಯ ಮೂಲಕ ಸಮಾಜ ಘಾತಕರ ನಿದ್ದೆ ಕೆಡಿಸುವ ‘ಹುಲಿ ಪತ್ರಿಕೆ’ ಹಾಗೂ ಜನರ ನಿದ್ದೆ ಕೆಡಿಸುವ ಹುಲಿಯ ಹುಡುಕಾಟದಲ್ಲಿ ಕತೆ ಸಾಗುತ್ತದೆ. ಸುಮಂತ ಸಿಗುತ್ತಾನ? ಹುಲಿ ಪತ್ರಿಕೆಯ ಸಂಪಾದಕರು ಯಾರು ? ಈ ಎಲ್ಲಾ ಪ್ರಶ್ನೆಗಳು ಒಂದು ಬಿಂದುವಿನಲ್ಲಿ ಕೂಡಿ ಓದುಗರ ಕುತೂಹಲ ತಣಿಸುತ್ತದೆ.\u003c\/span\u003e","brand":"Anush A. Shetty","offers":[{"title":"Default Title","offer_id":42020640719107,"sku":"HB00001410","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4157.jpg?v=1636357044"},{"product_id":"makkala-pratibheyannu-gurutisibelesi","title":"ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ","description":"\u003cp\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020640882947,"sku":"HB00001408","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/makkala-patibheyannu-gurutisibelasi1.jpg?v=1636357048"},{"product_id":"hemavati-teerada-kouthuka-kathegalu","title":"ಹೇಮಾವತಿ ತೀರದ ಕೌತುಕ ಕತೆಗಳು","description":"\u003cp\u003e\u003cspan\u003eಇದು ಸಾವಿರದ ಒಂಬೈನೂರಾ ತೊಂಭತ್ತರ ದಶಕದ ಆಚೀಚೆ ಹುಟ್ಟೂಲಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ಮಲೆನಾಡಿನ ರೋಚಕ ಕತೆಗಳ ಒಂಭತ್ತನೆಯ ಭಾಗ.\u003c\/span\u003e\u003cbr\u003e\u003cbr\u003e\u003cspan\u003eನಮ್ಮ ಸುತ್ತ-ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟದ್ದು, ಪಡವಿರುವುದು ಎರಡೂ ಇರುತ್ತದೆ. ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ-ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ನಲಿಸುತ್ತವೆ; ಬಾಧಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಅವರವರ ಕಷ್ಟ-ಸುಖಗಳ ಅನುಭವ ಎಂಥಾದ್ದು? ಎನ್ನುವುದನ್ನು ಅರ್ಥಮಾಡಿಕೊಂಡು ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿಸಲು ಶಕ್ತನಾಗುವ ಬರಹಗಾರ ಓದುಗರ ಮನ ಗೆಲ್ಲುತ್ತಾನೆ.\u003c\/span\u003e\u003cbr\u003e\u003cbr\u003e\u003cspan\u003eಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣಿಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಓದುಗರ ಮನ ಮುಟ್ಟದರೆ ಧನ್ಯತೆಯ ಭಾವ ನನ್ನದು. ಮಲೆನಾಡಿನ ರೋಚಕ ಕತೆಗಳ ಸರಣಿಗೆ, ಅಭೂತ ಪೂರ್ವ ಯಶಸ್ಸಿಗೆ, ರೋಚಕ ಮುನ್ನಡೆ ನೀಡಿ ಸಹಕರಿಸಿದ, ಸಹಕರಿಸುತ್ತಿರುವ ಎಲ್ಲರಿಗೂ ಈ ಕೃತಿ ಸಮರ್ಪಣಿ.\u003c\/span\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644028675,"sku":"HB00001364","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4161.jpg?v=1636357120"},{"product_id":"malenadina-mareyada-nenapugalu","title":"ಮಲೆನಾಡಿನ ಮರೆಯದ ನೆನಪುಗಳು","description":"","brand":"Girimane Shyamarao","offers":[{"title":"Default Title","offer_id":42020644159747,"sku":"HB00001363","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/malenadina-mareyada-nenapugalu.jpg?v=1636357122"},{"product_id":"mungarina-kare-kannada-suspense-thriller","title":"ಮುಂಗಾರಿನ ಕರೆ","description":"\u003cp\u003e\u003cspan\u003eಜೀವಸೆಲೆ ಇರುವುದೇ ಮಲೆನಾಡಿನಲ್ಲಿ! ಗುಡ್ಡ - ಬೆಟ್ಟ, ನದಿಗಳ ಅದ್ಭುತ, ಹಸಿರಿನ ನಾಡಿದು. ಇಲ್ಲಿನ ಮನಮೋಹಕ ದೃಶ್ಯಗಳಿಗೆ ಮನಸೋಲದವರೇ ಇಲ್ಲ. ಸೃಷ್ಟಿಕರ್ತ ತನ್ನ ಸೃಷ್ಟಿಸುವ ಜಾಣ್ಮೆಯನ್ನೆಲ್ಲಾ ಇಲ್ಲೇ ತೋರಿಸಿ 'ಬೇಕನ್ನುವವರು ಇಲ್ಲೇ ಬಂದು ನೋಡಿಕೊಳ್ಳಿ' ಎನ್ನುವಂತೆ ಮಾಡಿದ್ದಾನೆ . ಆಕಾಶದಲ್ಲಿ ದಟ್ಟ ಮೋಡ ಕೂಡಿಕೊಂಡು ವಾತಾವರಣ ತಂಪಾಗಿ, ಕಾಗೆಗಳು ಕಾ, ಕಾ, ಎನ್ನುತ್ತಿರುವಾಗಲೇ ಹನಿ ಹನಿಯಾಗಿ ಪಶ್ಚಿಮದ ಕಡೆಯಿಂದ ಬೀಸಿ ಬರುವ ತಂಗಾಳಿಯೊಂದಿಗೆ ಶುರುವಾಗುವ ಇಲ್ಲಿನ ಮುಂಗಾರು ಮಳೆಯ ಸೊಗಸೇ ಬೇರೆ . ಅದರ ನನಪು ಎಲ್ಲಿ ಹೋದರೂ ಮಾಸುವುದಿಲ್ಲ .\u003c\/span\u003e\u003cbr\u003e\u003cbr\u003e\u003cspan\u003eಇಲ್ಲಿ ಮಲೆನಾಡು ಎಂದರೆ ನಾನು ಹುಟ್ಟಿ ಬೆಳೆದ ಕಾಫಿನಾಡು. ಕಾಫಿತೋಟ ಎಂದರೇನು ? ಹೇಗಿರುತ್ತದೆ ? ಅದರ ಏಳು - ಬೀಳುಗಳೇನು ? ಇಲ್ಲಿನ ಬದುಕು , ಮಳೆಗಾಲದ ಪ್ರಕೃತಿ ಹೇಗಿರುತ್ತದೆ ? ಜನ ಎಂಥವರು ? ಅದಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ . ಜೊತೆಗೆ ಒಬ್ಬಳು ವಿದ್ಯಾವಂತ , ವಿಚಾರವಂತ ಮಲೆನಾಡಿನ ಯುವ ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ಸಲ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ .\u003c\/span\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644225283,"sku":"HB00001362","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4036.jpg?v=1636357123"},{"product_id":"hudugaata-hudukaata","title":"ಹುಡುಗಾಟ ಹುಡುಕಾಟ","description":"\u003cp\u003eಹದಿಹರೆಯದ ಭಾವನೆಗಳು ಎಲ್ಲರಿಗೂ ಅರ್ಥವಾಗದು. ಅಲ್ಲಿ ಎಲ್ಲವನ್ನೂ ತಿಳಿಯುವ ಕುತೂಹಲವಿರುತ್ತದೆ. ಏನನ್ನಾದರೂ ಮಾಡುವ ಸಾಹಸ ಪ್ರವೃತ್ತಿಯಿರುತ್ತದೆ. ಗುಡ್ಡಹತ್ತುವ ಉತ್ಸಾಹ, ಕಲ್ಲಿಗೆ ತಲೆ ಚಚ್ಚಿಕೊಳ್ಳುವ ಹುಂಬತನ ಇರುತ್ತದೆ. ಪ್ರೀತಿ-ಪ್ರೇಮಗಳ ಸುಮಧುರ ಭಾವ ಚಿಗುರೊಡೆಯುತ್ತಾ ಎದೆಯನ್ನು ಕಲಕುತ್ತಿರುತ್ತದೆ. ಅವರ ಭಾವನೆಗಳು ಹಿರಿಯರಿಗೆ ಹುಚ್ಚುತನವಾಗಿ ಕಾಣುತ್ತದೆ. ಆದರೆ ಅಂತಹಾ ಒಂದು ಸ್ಥಿತಿಯನ್ನು ದಾಟಿಯೇ ಬಂದಿರುವುದನ್ನು ಆ ಹಿರಿಯರು ಮರೆತುಬಿಡುತ್ತಾರೆ. ಪಶ್ಚಿಮಘಟ್ಟದ ಕಾಡಿನಲ್ಲಿ ಕಳೆದುಹೋಗಿಯೂ ಬದುಕಿ ಬಂದ ಮೂವರು ಉತ್ಸಾಹಿ ಹದಿಹರೆಯದವರ ಕಥಾವಸ್ತುವಿರುವ ಕಾದಂಬರಿ ಇದು.\u003cbr\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020644290819,"sku":"HB00001361","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hudugata-hudukata.jpg?v=1636357125"},{"product_id":"ondu-aaneya-suttha","title":"ಒಂದು ಆನೆಯ ಸುತ್ತ","description":"\u003cp\u003eಒಂದು ಆನೆಯ ಸುತ್ತ (ಮಲೆನಾಡಿನ ರೋಚಕ ಕತೆಗಳು ಭಾಗ – 5)\u003c\/p\u003e\n\u003cp\u003eನಾವು ಸಾಮಾನ್ಯವಾಗಿ ಆನೆಗಳನ್ನು ಎಲ್ಲಿ ನೋಡುತ್ತೇವೆ? ಕಾಡುಗಳಲ್ಲಿ, ಪ್ರಾಣಿಸಂಗ್ರಹಾಲಯದಲ್ಲಿ, ದೊಡ್ಡ ದೊಡ್ಡ ದೇವಾಲಯಗಳಲ್ಲಿ, ಸರ್ಕಸ್ ಗಳಲ್ಲಿ, ದಸರೆಗೆ ಅಂಬಾರಿ ಹೊರುವಾಗ. ಆನೆಯ ಆಕಾರ ಭವ್ಯ. ಆನೆಯ ನಡಿಗೆ ರಾಜನಡಿಗೆ. ಗಾಂಭೀರ್ಯಕ್ಕೆ ಇನ್ನೊಂದು ಹೆಸರೇ ಆನೆ. ಈಗ ಭೂಮಿಯ ಮೇಲಿರುವ ಪ್ರಾಣಿಸಂತತಿಗಳಲ್ಲಿ ಅತ್ಯಂತ ದೈತ್ಯಾಕಾರದ, ಬಲಿಷ್ಠವಾದ ಪ್ರಾಣಿಯೆಂದರೆ ಆನೆ. ಆನೆಯನ್ನು ಗಣೇಶನಿಗೆ ಹೋಲಿಸಿ ಕೈಮುಗಿಯುತ್ತೇವೆ. ಆನೆ ನಡೆದದ್ದೇ ದಾರಿ ಎಂಬ ಗಾದೆಯೂ ಇದೆ. ಅಬಾಲವೃದ್ಧರಾಗಿ ಎಲ್ಲರಿಗೂ ಆನೆಯ ನಡೆ, ನಡತೆ, ಸ್ವರೂಪ, ಚರ್ಯೆ ಸೋಜಿಗವೇ.\u003c\/p\u003e\n\u003cp\u003eಆದರೆ ಇತ್ತೀಚಿನ ದಿನಗಳಲ್ಲಿ ಆನೆಗಳು ಕಾಡನ್ನು ತೊರೆದು, ನಾಡಿಗೆ ಬರುವುದು, ಬೆಳೆ ನಾಶ ಮಾಡುವುದು, ಮನುಷ್ಯರನ್ನು ಬಲಿತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಬೇಕೆಂದು ಯಾರಿಗೂ ತೊಂದರೆ ಮಾಡದ, ಯಾವ ಪ್ರಾಣಿಯನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲದ ಆನೆ ಮನುಷ್ಯನ ಮೇಲೆರಗಲು ಕಾರಣವೇನು? ಮನುಷ್ಯನೇ ಅಲ್ಲವೇ? ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಸೌಕರ್ಯಗಳಿಗಾಗಿ, ತನ್ನ ಸಂಪರ್ಕ ಸಾಧನಗಳಿಗಾಗಿ ಅರಣ್ಯಗಳನ್ನು ಕಡಿದು, ನಾಶಮಾಡಿ, ಅವುಗಳನ್ನು ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದರೆ ಆನೆಗಳಾದರೂ ಎಲ್ಲಿಗೆ ಹೋದಾವು?\u003c\/p\u003e","brand":"Girimane Shyamarao","offers":[{"title":"Default Title","offer_id":42020644389123,"sku":"HB00001360","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ondu-aaneya-sutta.jpg?v=1636357126"},{"product_id":"jenukallina-rahasya-kanive","title":"ಜೇನು ಕಲ್ಲಿನ ರಹಸ್ಯ ಕಣಿವೆ","description":"","brand":"Girimane Shyamarao","offers":[{"title":"Default Title","offer_id":42020644454659,"sku":"HB00001359","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3873.jpg?v=1636357128"},{"product_id":"paschimaghattada-tapppalinalli","title":"ಪಶ್ಚಿಮಘಟ್ಟದ ತಪ್ಪಲಿನಲ್ಲಿ","description":"\u003cp\u003eಪಶ್ಚಿಮ ಘಟ್ಟ ಸೂರೆ ಹೋಗುತ್ತಿದೆ. ತಿಳಿದೋ ತಿಳಿಯದೆಯೋ ಇಂಚಿಂಚಾಗಿ ಅದನ್ನು ನಾಶ ಮಾಡುತ್ತಿದ್ದೇವೆ. ಇಲ್ಲಿ ಮುಂದಾಲೋಚನೆ ಇಲ್ಲದೆ ಮಾನವ ಇಡುವ ಒಂದೊಂದು ಹೆಜ್ಜೆಯೂ ತಪ್ಪು ಹೆಜ್ಜೆಗಳಾಗುತ್ತವೆ. ಮಾಡುವ ಒಂದೊಂದು ತಿಳಿಗೇಡಿತನದ ಕೆಲಸದಿಂದಲೂ ತುಂಬಲಾರದ ನಷ್ಟ ಉಂಟಾಗುತ್ತದೆ. ಅದನ್ನು ನಾಶ ಮಾಡಿಯೇ ನಾವು ಬದುಕುವ ಅನಿವಾರ್ಯತೆ ಏನೂ ಇಲ್ಲ. ಇರುವುದನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಿಕೊಳ್ಳುವ ಚಾಕಚಕ್ಯತೆ, ದೂರದೃಷ್ಟಿ, ಛಲ, ಪ್ರಾಮಾಣಿಕ ಪ್ರಯತ್ನ ನಮಗಿಲ್ಲ ಅಷ್ಟೆ. ಸಮೃದ್ಧಿಯಾಗಿ ಸಿಗುವ ಸೌರಶಕ್ತಿಯನ್ನು ಪರಿಸರಕ್ಕೆ ಹಾನಿಯಾಗದಂತೆ ಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಎಷ್ಟು ನಡೆದಿದೆ? ಪಶ್ಚಿಮಘಟ್ಟದ ಹೃದಯ ಭಾಗದಲ್ಲಿ ಕಟ್ಟುವ ಒಂದು ಡ್ಯಾಂನಿಂದ ಅದೆಷ್ಟು ಅನಾಹುತಗಳಾಗಬಹುದೆಂಬ ಕಲ್ಪನೆ ಪಶ್ಚಿಮಘಟ್ಟದ ಸೆರಗಿನಲ್ಲಿಯೇ ಹುಟ್ಟಿ ಬೆಳೆದು ಕಷ್ಟ ನಷ್ಟ ಅನುಭವಿಸಿದ ನನಗೆ ಓದಿ ತಿಳಿಯಬೇಕಿಲ್ಲ. ಅಲ್ಲಲ್ಲಿ ಅದೇ ಕೆಲಸ ಮುಂದುವರೆದರೆ ಪರಿಣಾಮ? ಅದೇಕೆ ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಹೋಗುತ್ತಾರೆ ಜನ? ಅದೇಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಕೆಟ್ಟ ವ್ಯವಸ್ಥೆಯೊಳಗೆ ಸಿಲುಕಿದ ಮಕ್ಕಳ ಬದುಕು ಹೇಗಾಗುತ್ತದೆ? ಎಲ್ಲದರ ಒಂದು ಚಿತ್ರಣ ಈ ಪುಸ್ತಕದಲ್ಲಿ ನಿಮಗೂ ಸಿಗಬಹುದು.\u003c\/p\u003e","brand":"Girimane Shyamarao","offers":[{"title":"Default Title","offer_id":42020644520195,"sku":"HB00001358","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3955.jpg?v=1636357130"},{"product_id":"aramane-guddada-karala-raatri","title":"ಅರಮನೆ ಗುಡ್ಡದ ಕರಾಳ ರಾತ್ರಿಗಳು","description":"\u003cp\u003eಪಶ್ಚಿಮ ಘಟ್ಟದಲ್ಲಿ ಚಾರಣ ಮಾಡುವವರು ಒಂದಿಷ್ಟಾದರೂ ಅದರ ಬಗ್ಗೆ ಮೊದಲೇ ತಿಳಿದಿರಬೇಕು. ಅದರಂಚಿನಲ್ಲೇ ಹುಟ್ಟಿ ಬೆಳದ ನನಗೆ ಅದು ಹೊಸತಲ್ಲ. ಆದರೆ ಬಯಲು ಸೀಮೆಯವರಿಗೆ ಇಲ್ಲಿನ ಎಲ್ಲವೂ ಹೊಸತು ಮಾತ್ರವಲ್ಲ; ಇಲ್ಲಿನ ಮಳೆಗಾಲದ ಆರ್ಭಟ, ಪರಿಸರ, ಪ್ರಾಣಿ-ಪಕ್ಷಿ, ಕತ್ತಲು, ದಿಕ್ಕು-ದೆಸೆ ಎಲ್ಲವೂ ನಿಗೂಢ. ಕಾಡಿನೊಳಗೆ ತಪ್ಪಿಸಿಕೊಂಡರೆ ಏನು ತಿನ್ನಬಹುದು? ಹೇಗೆ ಬದುಕುಳಿಯಬಹುದು? ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಇಲ್ಲಿನ ಕಾಡಿನ ಲೂಟಿ, ಅನಾಚಾರಗಳ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಕಾಲ್ಪನಿಕ ಕತೆಯ ಜೊತೆ ಇಲ್ಲಿನ ನೈಜ ಚಿತ್ರಣವನ್ನೂ ಇದರಲ್ಲಿ ಕೊಡುತ್ತಿದ್ದೇನೆ. ಆಸಕ್ತರಿಗೆ ಕತೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇದರಲ್ಲಿ ಸಿಗಬಹುದು. ಇದು ಪಶ್ಚಿಮಘಟ್ಟದ ಅನಾವರಣದ 'ಮಲೆನಾಡಿನ ರೋಚಕ ಕತೆ'ಗಳ ಎರಡನೆಯ ಕಂತು. \u003c\/p\u003e","brand":"Girimane Shyamarao","offers":[{"title":"Default Title","offer_id":42020644585731,"sku":"HB00001357","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aramane-guddada-karala-ratrigalu.jpg?v=1636357131"},{"product_id":"malenadina-rochaka-kategalu-1-kannada-booksk","title":"ಮಲೆನಾಡಿನ ರೋಚಕ ಕತೆಗಳು ಭಾಗ-1","description":"\u003cp\u003eಬಟ್ಟ ಬಯಲಿನಂತಲ್ಲ ಮಲೆನಾಡು. ಇಲ್ಲಿನ ಜಡಿಗುಟ್ಟಿ ಸುರಿವ ಮಳೆಯ ರುದ್ರ ನರ್ತನ, ಮೊಗೆವ ಹಸಿರಿನ ಮೇಲೆ ಹಾಸುವ ಮಂಜು, ಬೆಟ್ಟ-ಗುಡ್ಡಗಳ ಮೇಲಿನ ಎಳೆಬಿಸಿಲ ಚೇತೋಹಾರಿ ನೋಟ, ಹನ್ನೆರಡು ತಿಂಗಳ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯ ಇನ್ನೆಲ್ಲೂ ಸಿಗದು. ಭತ್ತ, ಏಲಕ್ಕಿ, ಕಾಫಿ, ಕಿತ್ತಳೆ, ಕಾಳುಮೆಣಸಿನ ಪರಿಮಳದ ಇಲ್ಲಿನ ಸಂ‌ಘರ್ಷದ ಬದುಕಿನ ಜೊತೆಗೆ ತುಳುಕು ಹಾಕಿಕೊಂಡ ಪ್ರಾಣಿ-ಪಕ್ಷಿಗಳ ಚಿತ್ರ ವಿಚಿತ್ರ ಘಟನೆಗಳು ಕೂಡ ಬೆರುಗ ಹುಟ್ಟಿಸುವಂಥದ್ದೇ. ಹಾವು-ಮುಂಗುಸಿ ವೈರ, ದೈತ್ಯ ಆನೆಯ ಶಕ್ತಿಪ್ರದರ್ಶನ, ಹೆಜ್ಜೇನುಗಳ ಮಾರಕ ದಾಳಿ, ಮೊಸಳೆ ಭಯ, ಕಳ್ಳಭಟ್ಟಿಯ ದುರಂತ, ಕೃಷಿಕನ ಕಷ್ಟ-ನಷ್ಟಗಳು, ಹಾದರದ ವ್ಯಥೆ, ಎಲ್ಲದರಲ್ಲಿಯೂ ಅವುಗಳದ್ದೇ ಆದ ರೋಚಕತೆ ಇದೆ. ಮಲೆನಾಡಿಗೆ ಸಾಟಿ ಮಲೆನಾಡು ಮಾತ್ರ! ಅನುಭವ ಇಲ್ಲದವರು ಅದನ್ನು ಓದಿಯೂ ಅನುಭವಿಸಬಹುದು.\u003c\/p\u003e","brand":"Girimane Shyamarao","offers":[{"title":"Default Title","offer_id":42020644684035,"sku":"HB00001356","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4009.jpg?v=1636357133"},{"product_id":"karnatakadalli-turtu-paristhiti","title":"ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ - ಪ್ರಭಾವ ಮತ್ತು ಪರಿಣಾಮಗಳು","description":"\u003cp\u003eತುರ್ತು ಪರಿಸ್ಥಿತಿ ಭಾರತದ ಉದ್ದಗಲಕ್ಕೂ ಪೋಲಿಸ್ ಆಡಳಿತ, ನಾಗರೀಕ ಹಕ್ಕುಗಳ ದಮನಕ್ಕೆ ಕಾರಣವಾಗಿತ್ತು. ಕರ್ನಾಟಕವೂ ಇದಕ್ಕೆ ಪೂರ್ತಿಯಾಗಿ ಹೊರತಾಗಿರಲಿಲ್ಲ. ಆದರೆ ಕರ್ನಾಟಕ ಅದೇ ಸಮಯದಲ್ಲಿ ಭೂ ಸುಧಾರಣೆಯಂತಹ ದೊಡ್ಡಹೆಜ್ಜೆ ಇರಿಸುವ ಮೂಲಕ ನಾಡಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕಾರಣದ ಚಹರೆಯನ್ನು ದೊಡ್ಡ ಮಟ್ಟದಲ್ಲಿ ಬದಲಿಸುವ ಕೆಲಸಕ್ಕೂ ಸಾಕ್ಷಿಯಾಯಿತು. 1970ರ ದಶಕದ ಕರ್ನಾಟಕದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ಇದೊಂದು ಮಹತ್ವದ ಕೃತಿ. ಡಾ.ಎಸ್.ರಶ್ಮಿ ಅವರ ಡಾಕ್ಟರೇಟ್ ಮಹಾಪ್ರಬಂಧವನ್ನು ಅಭಿನವ ಪ್ರಕಾಶನ ಪುಸ್ತಕವಾಗಿ ಹೊರ ತಂದಿದೆ.\u003c\/p\u003e","brand":"Dr. Rashmi S.","offers":[{"title":"Default Title","offer_id":42020663984387,"sku":"HB00001222","price":500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/06_99cf859e-83a5-4405-bed0-f1f793594857.jpg?v=1636357425"},{"product_id":"vijnana-tantrajnana-pada-sampada","title":"ವಿಜ್ಞಾನ - ತಂತ್ರಜ್ಞಾನ ಪದಸಂಪದ","description":"\u003cp\u003eತಾಂತ್ರಿಕ ಪದವೊಂದರ ತಿರುಳನ್ನು ಕನ್ನಡದಲ್ಲಿ ತಿಳಿಯಲು ಮಾಡಲಾಗಿರುವ ಅತೀ ದೊಡ್ಡ ಪ್ರಯತ್ನ ಇದಾಗಿದೆ. ವಿಷಯ ತಜ್ಞರು, ಭಾಷಾ ತಜ್ಞರು ಹಾಗೂ ನವ ಕರ್ನಾಟಕ ಸಂಸ್ಥೆಯ ಒಟ್ಟಾರೆ ಪ್ರಯತ್ನದ ಫಲವಾಗಿ ಈ ಪುಸ್ತಕ ಮೂಡಿಬಂದಿದೆ.\u003c\/p\u003e","brand":"Navakarnataka","offers":[{"title":"Default Title","offer_id":42020667818243,"sku":"HB00001189","price":750.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4076.jpg?v=1636357502"},{"product_id":"vijnanada-heddaariyalli","title":"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು","description":"\u003cp\u003e \u003c\/p\u003e\n\u003cp class=\"\"\u003eಜ್ಞಾನ-ತಂತ್ರಜ್ಞಾನಗಳು ಹಲವು ಶತಮಾನಗಳಿಂದ ಸಾಗಿಬಂದಿರುವ ಹಾದಿಯಲ್ಲಿ ದಾಟಿರುವ ಮೈಲಿಗಲ್ಲುಗಳು ಹಲವು. ಇಂತಹ ಪ್ರತಿಯೊಂದು ಮೈಲಿಗಲ್ಲನ್ನು ದಾಟಿದಾಗಲೂ ಮನುಷ್ಯನ ಬದುಕಿನ ಮೇಲೆ ವಿಜ್ಞಾನದ, ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಲೇ ಹೋಗಿದೆ. ಇದು ವಿಜ್ಞಾನದ ಯುಗ.\u003c\/p\u003e\n\u003cbr\u003e\n\u003cp class=\"\"\u003eಅಂದಹಾಗೆ ಈ ಪ್ರಯಾಣದಲ್ಲಿ ಎದುರಾದವು ಬರಿಯ ಮೈಲಿಗಲ್ಲುಗಳಷ್ಟೇ ಅಲ್ಲ, ಕೆಲ ಬೆಳವಣಿಗೆಗಳಿಂದಾಗಿ ಮಹಾತಿರುವುಗಳೂ ಸೃಷ್ಟಿಯಾಗಿವೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳಿಂದ ಪ್ರಾರಂಭಿಸಿ ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನಗಳವರೆಗೆ ವಿಜ್ಞಾನ- ತಂತ್ರಜ್ಞಾನದ ಎಲ್ಲ ಶಾಖೆಗಳೂ ಇಂತಹ ಮಹಾತಿರುವುಗಳನ್ನು ಕಂಡಿವೆ. ಒಂದೊಂದೂ ವಟವೃಕ್ಷವಾಗಿ ಬೆಳೆದಿವೆ.\u003c\/p\u003e\n\u003cbr\u003eವಿಜ್ಞಾನದ ಹೆದ್ದಾರಿಯ ಪಥ ಬದಲಿಸಿದ ಇಂತಹ ಅನೇಕ ಮಹಾತಿರುವುಗಳನ್ನು ಕನ್ನಡದಲ್ಲಿ ಪರಿಚಯಿಸುವ ವಿಶಿಷ್ಟ ಕೃತಿ \"ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು\". ವಿಜ್ಞಾನ ಕ್ಷೇತ್ರದಲ್ಲಿ ಕನ್ನಡದಲ್ಲಿ ಲೇಖನಗಳನ್ನು ಬರೆಯುವ 26 ಬರಹಗಾರರು, ವಿದ್ವಾಂಸರು ತಮ್ಮ ಸ್ವಅನುಭವಗಳನ್ನು ಆಧರಿಸಿ ಬರೆದಿರುವ ಲೇಖನಗಳನ್ನು ಕೃತಿ ಒಳಗೊಂಡಿದೆ.\u003cstrong\u003e\u003cb class=\"\"\u003e\u003cbr class=\"\"\u003e\u003c\/b\u003e\u003c\/strong\u003e","brand":"Dr. T R Anantharamu","offers":[{"title":"Default Title","offer_id":42020668637443,"sku":"HB00001181","price":990.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4079.jpg?v=1636357523"},{"product_id":"halagannada-bhashe-bhasha-vikasa","title":"ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ","description":"\u003cp\u003e2200 ಹಳಗನ್ನಡದ ಶಾಸನಗಳನ್ನು ಆಕರವನ್ನಾಗಿಟ್ಟುಕೊಂಡು 18 ವಿದ್ವಾಂಸರು 32 ಪ್ರಬಂಧಗಳಲ್ಲಿ ಬರೆದ ವಿಷಯಗಳನ್ನು ಖ್ಯಾತ ಇತಿಹಾಸ ತಜ್ಞ ಷ.ಶೆಟ್ಟರ್ ಅವರು \"ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ\" ಹೆಸರಿನ ಈ ಅದ್ಭುತ ಹೊತ್ತಗೆಯಲ್ಲಿ ಸಂಪಾದಿಸಿದ್ದಾರೆ. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರು ಈ ಕೃತಿಯ ಕೆಲಸದಲ್ಲಿ ಪಾಲ್ಗೊಂಡು ಹಳಗನ್ನಡ ಶಾಸನಗಳ ಬಗ್ಗೆ ಇಂದಿಗೂ ಚರ್ಚಿಸದ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಹರಿಯುವಂತೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ.\u003c\/p\u003e","brand":"S. Shettar","offers":[{"title":"Default Title","offer_id":42020669915395,"sku":"HB00001173","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4142.jpg?v=1636357541"},{"product_id":"bengalurina-itihasa","title":"ಬೆಂಗಳೂರಿನ ಇತಿಹಾಸ","description":"\u003cp\u003eಬೆಂಗಳೂರು \"ಬೆಂದಕಾಳೂರು\" ಎಂಬ ಹೆಸರಿಂದಾ ಬಂದಿದ್ದಾ? ಅಥವಾ \"ವೆಂಗಳೂರು\" ಅನ್ನುವ ಹೆಸರಿಂದ ಬಂತಾ? ಬೆಂಗಳೂರಿನ ಇತಿಹಾಸದ ಪ್ರತಿಯೊಂದು ಹೆಜ್ಜೆಯ ಗುರುತನ್ನು ದಾಖಲಿಸಿ ಬೆಂಗಳೂರಿನ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ \"ಬೆಂಗಳೂರಿನ ಇತಿಹಾಸ\". ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿ ಬೆಂಗಳೂರು ಕುರಿತ ಪತ್ರವ್ಯವಹಾರವನ್ನೆಲ್ಲ ಪರಿಶೀಲಿಸಿ ಕೆಂಪೇಗೌಡರ ಕಾಲದಿಂದ ಇಂದಿನವರೆಗಿನ ಬೆಂಗಳೂರಿನ ಇತಿಹಾಸವನ್ನು ಇಂದಿನ ತಲೆಮಾರಿಗೆ ಕಟ್ಟಿ ಕೊಡುವ ಸಾರ್ಥಕ ಕೆಲಸವನ್ನು ಬ.ನ.ಸುಂದರರಾವ್ ಅವರು ಮಾಡಿದ್ದಾರೆ. ಬೆಂಗಳೂರಿನ ಕುರಿತು ಬಂದಿರುವ ಮಹತ್ವದ ಪುಸ್ತಕಗಳಲ್ಲಿ ಇದೂ ಒಂದು.\u003c\/p\u003e","brand":"B. N. Sundar Rao","offers":[{"title":"Default Title","offer_id":42020670046467,"sku":"HB00001172","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3980.jpg?v=1636357544"},{"product_id":"kannada-jagattu","title":"ಕನ್ನಡ ಜಗತ್ತು","description":"\u003cp\u003eಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ. ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಕನ್ನಡದ ಯುವ ಬರಹಗಾರ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಅಂಕಣ ಮಾಡಿತ್ತು. ಆಯ್ದ ಅಂಕಣ ಬರಹಗಳ ಸಂಕಲನ ಈ ಪುಸ್ತಕ.\u003c\/p\u003e","brand":"Vasanth Shetty","offers":[{"title":"Default Title","offer_id":42020671258883,"sku":"PHB000009","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3824.jpg?v=1636357575"},{"product_id":"hosa-vichaaragalu-articles-k-p-poornachandra-tejaswi-kannada-book","title":"ಹೊಸ ವಿಚಾರಗಳು","description":"\u003cp\u003eಕನ್ನಡ ನಾಡು ಕಂಡ ಮಹತ್ವದ ಚಿಂತಕರಲ್ಲಿ ತೇಜಸ್ವಿ ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ತೇಜಸ್ವಿ ಅವರು ತೆರೆದುಕೊಳ್ಳದ, ಮಾತನಾಡದ ವಿಷಯಗಳೇ ಇಲ್ಲ ಅನ್ನಬಹುದು. ಅವರ ಅನೇಕ ಲೇಖನ, ಭಾಷಣ ಮತ್ತು ಸಂದರ್ಶನಗಳನ್ನು ಕಲೆಹಾಕಿ ಹೊರತರಲಾದ ಹೊತ್ತಗೆ ಇದಾಗಿದೆ. ಕನ್ನಡದ ನೆಲ, ಜಲ, ಭಾಷೆ, ಆರ್ಥಿಕತೆ, ಶಿಕ್ಷಣ, ರಾಜಕೀಯ, ಚಳವಳಿ, ಧಾರ್ಮಿಕತೆ, ಪರಿಸರ ಹೀಗೆ ಎಲ್ಲದರ ಬಗ್ಗೆ ತೇಜಸ್ವಿ ಅವರು ಬರೆದ ಅಪರೂಪದ ಲೇಖನಗಳು ಈ ಹೊತ್ತಗೆಯಲ್ಲಿವೆ. ತೇಜಸ್ವಿಯವರ ಸಾರ್ವಜನಿಕ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ಹೊಂದಿರುವ ಈ ಪುಸ್ತಕ ಬಹಳ ಇಂದಿಗೂ ಹೆಚ್ಚು ಮಾರಾಟವಾಗುವ ಕೃತಿಗಳಲ್ಲೊಂದಾಗಿದೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020671914243,"sku":"HB00001154","price":795.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4166.jpg?v=1636357587"},{"product_id":"karnataka-samskruti-sameekshe","title":"ಕರ್ಣಾಟಕ ಸಂಸ್ಕೃತಿ ಸಮೀಕ್ಷೆ","description":"\u003cp\u003eಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಈ ಕೃತಿ ಈಗ ಹನ್ನೊಂದನೇ ಮುದ್ರಣ ಕಂಡಿದ್ದು, ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕರ್ಣಾಟಕದ ಇತಿಹಾಸದ ತಿಳಿವಿಗೆ ಈ ಹೊತ್ತಗೆ ಸಹಕಾರಿಯಾಗಿದೆ.\u003c\/p\u003e","brand":"Dr. H. Tipperudra Swamy","offers":[{"title":"Default Title","offer_id":42020679123203,"sku":"HB00001100","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Karnataka-Samskruti-Sameekshe-Front.jpg?v=1636357704"},{"product_id":"halagannada-lipi-lipikaara-lipi-vyavasaaya","title":"ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ","description":"\u003cp\u003eಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥಕೋಶದೊಡನೆ ವಿದ್ವತ್ಪೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ಕನ್ನಡ ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.\u003cbr data-mce-fragment=\"1\"\u003e\u003cbr\u003e\u003c\/p\u003e","brand":"S. Shettar","offers":[{"title":"Default Title","offer_id":42020679680259,"sku":"HB00001094","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4144.jpg?v=1636357718"},{"product_id":"agni-shike-kannada-book","title":"ಅಗ್ನಿಶಿಖೆ - ಎಂ ಎನ್ ವ್ಯಾಸರಾವ್ ಸಮಗ್ರ ಕಾವ್ಯ","description":"","brand":"Kaggere Prakash, Sridhar Banavasi","offers":[{"title":"Default Title","offer_id":42086208897283,"sku":"HB00001062","price":600.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/agnishike_1.jpg?v=1637583442"},{"product_id":"pushpa-gandhi-kannada-book","title":"ಪುಷ್ಪಗಂಧಿ - ಎಂ ಎನ್ ವ್ಯಾಸರಾವ್ ಸಮಗ್ರ ಕಥೆಗಳು","description":"ಬದುಕಿನ ವಿವಿಧ ಅನುಭವಗಳನ್ನು ಪ್ರತಿಫಲಿಸುವ ಇಲ್ಲಿನ ಕತೆಗಳಲ್ಲಿ ಮನುಷ್ಯ ಸಂಬಂಧಗಳ ಶೋಧನೆಯೇ ಪ್ರಮುಖವಾಗಿದೆಯೆನ್ನಬಹುದು. ಕೆಲವು ಕತೆಗಳು ಹಗೆತನದ ಅಥವಾ ಕ್ರೌರ್ಯದ ಸನ್ನಿವೇಶಗಳಲ್ಲಿ ಬದುಕುತ್ತಿರುವವರ ಬಾಳಿನಲ್ಲಿ ಭಾವೋದ್ರೇಕದ, ಅಚ್ಚರಿಯ ಅಥವಾ ಭ್ರಮನಿರಸನದ ಕ್ಷಣಗಳನ್ನು ಪಡಿಮೂಡಿಸುತ್ತವೆ. ಪ್ರೀತಿ ಮತ್ತು ವಿರಸ, ದಾಂಪತ್ಯ ಮತ್ತು ಸಾವು, ಇವು ಪರಸ್ಪರ ತೀರ ಹತ್ತಿರದಲ್ಲಿರುವ ಲೋಕವೊಂದನ್ನು ಪರಿಶೀಲಿಸುತ್ತವೆ. ಧಾಟಿಯಲ್ಲಿ ಆಶಯದಲ್ಲಿ ವಿಭಿನ್ನವಾಗಿದ್ದರೂ ವಿಷಾದವು ಹೇಗೋ ಹಾಗೆ ಖಿನ್ನತೆಯೂ ತುಂಬಿರುವ ಮನುಷ್ಯ ಸ್ಥಿತಿಯನ್ನು ಸೂಕ್ಷ್ಮವಾಗಿಯೂ ಗಾಢವಾಗಿಯೂ ಅರಿತುಕೊಳ್ಳಲು ಪ್ರಯತ್ನಿಸುತ್ತವೆ, ಅರ್ಥಪೂರ್ಣ ವ್ಯಂಗ್ಯದ, ಕಣ್ಣಿಗೆ ಕಟ್ಟುವಂಥ, ನಾಟಕೀಯ ಗುಣವುಳ್ಳ ಪ್ರತಿಮೆಗಳ, ಬದಲಾಗುವ ಪಾತ್ರಗಳ ಹಾಗೂ ಸನ್ನಿವೇಶಗಳ ಒಂದು ಕೆಲಿಡೋಸ್ಕೋಪೇ ಇಲ್ಲಿನ ಕತೆಗಳಲ್ಲಿದೆ.\n\u003cdiv id=\"gtx-trans\" style=\"position: absolute; left: 400px; top: 170px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Kaggere Prakash, Sridhar Banavasi","offers":[{"title":"Default Title","offer_id":42086280986883,"sku":"HB00001061","price":500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/pushpagandhi_1.jpg?v=1637584170"},{"product_id":"neenu-ninnolage-kaidi-kannada-book","title":"ನೀನು ನಿನ್ನೊಳಗೆ ಖೈದಿ","description":"\u003cp\u003e\u003cspan data-mce-fragment=\"1\"\u003eಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ‌ ಶತಮಾನದ ಭೌತವಿಜ್ಞಾನ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಬೆಳವಣಿಗೆ. ಸಾಮಾನ್ಯರ ಅರಿವಿಗೇ ಬಾರದಂತೆ, ಅವರ ಜೀವನವನ್ನ ಬದಲಿಸಿರುವ ವೈಜ್ಞಾನಿಕ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ‌ ಅರಿವಾದೀತು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenon's) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು‌, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕೇವಲ‌ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ‌ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ‌ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.\u003c\/span\u003e\u003c\/p\u003e","brand":"Anush A. Shetty","offers":[{"title":"Default Title","offer_id":42086398656771,"sku":"HB00001059","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/neenuninnolagekaidi_1.jpg?v=1637587143"},{"product_id":"aahuti-kannada-novel-anush-shetty","title":"ಆಹುತಿ","description":"\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷ್ ಅವರ ಬರಹಗಳು ಕಥೆ ಕಟ್ಟುವಿಕೆ ಸರಳವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಅನುಷಾ ಅವರ ಲೇಖನಗಳು ಪ್ರಕೃತಿಯ ಪ್ರೀತಿ ಇದರ ಜೊತೆಯಲ್ಲಿ ನಮಗೆ ಪೂರ್ಣಚಂದ್ರ ತೇಜಸ್ವಿಯವರು ನೆನಪಾಗುತ್ತಾರೆ. \u003c\/span\u003e\u003cspan data-mce-fragment=\"1\"\u003eಪಾತ್ರದ ವಿವರಣೆ,ಕಥೆ ಓದುವಾಗ ಘಟನೆಗಳು ಚಿತ್ರಗಳಂತೆ ನಮ್ಮ ಸುತ್ತಮುತ್ತಲೇ ನಡೆಯುತ್ತಿರುವುದು ಎಂದು ಭಾವನೆ ಮೂಡುತ್ತದೆ.\u003c\/span\u003e\u003cbr data-mce-fragment=\"1\"\u003e","brand":"Anush A. Shetty","offers":[{"title":"Default Title","offer_id":42086421135619,"sku":"HB00001058","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aahuti_1.jpg?v=1637587820"},{"product_id":"jodpaala-kannada-novel","title":"ಜೋಡ್ಪಾಲ","description":"\u003cspan data-mce-fragment=\"1\"\u003eಜೋಡ್ಪಾಲದ ತಿರುವಿನಲ್ಲಿ ಸಿಕ್ಕಿದ ಕೆಂಪು ಹರಳಿನ ಸರಕ್ಕೂ, ಕಾಣೆಯಾದ ಪೆಮ್ಮಯ್ಯ - ರಾಬರ್ಟ್ - ರಾಜುವಿಗೂ, ಘಾಟಿಯಲ್ಲಿ ಬಿದ್ದ ಟ್ಯಾಂಕರಿಗೂ , ಮಂಗಳೂರಿನ ತಣ್ಣೀರುಬಾವಿಯಲ್ಲಿ ಮುಳುಗಿದ ಕ್ವೀನ್-||| ಹಡಗಿಗೂ, ಅಲ್ಲಿನ ಮೀನು ಹಿಡಿಯುವ ಮರಕಲರಿಗೂ ಏನು ಸಂಭಂದ?\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಜೋಡ್ಪಾಲ - ಕನ್ನಡದ ಉದಯೋನ್ಮುಖ ಲೇಖಕರಾದ ಅನುಷ್ ಶೆಟ್ಟಿಯವರ ಮೂರನೇ ಕೃತಿ. ಕಥೆಯಲ್ಲಿ ಮೂರು ಭಾಗಗಳಿದ್ದು , ಮೊದಲನೆಯದು ಮಡಿಕೇರಿ - ಜೋಡ್ಪಾಲದ ಆಸುಪಾಸಿನಲ್ಲಿ ನಡೆಯುತ್ತದೆ. ಇಲ್ಲಿ ಶೇಖರ - ಬಬಿತಾರ ಪ್ರೇಮ ಕಥೆಯಿದೆ, ರಾಬರ್ಟ್ - ಪೆಮ್ಮಯ್ಯರ beyond the world ಮಾತು ಕತೆಗಳಿವೆ, ಕಿಟ್ಟು ಹಾಗೂ ಎಂದೋ ರಸ್ತೆ ಬದಿ ಕೆಟ್ಟು ನಿಂತ ರೋಡ್ ರೋಲರ್ ನಡುವಿನ ಸ್ನೇಹ ಸಂಬಂಧವಿದೆ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ನಡೆಯುವ ಟ್ಯಾಂಕರ್ ಆಕ್ಸಿಡೆಂಟ್ ಕಥೆಗೆ ಒಂದು ಟ್ವಿಸ್ಟ್ ಕೊಟ್ಟು, ಮುಂದೆ ನಡೆಯುವ ಮಿಸ್ಸಿಂಗ್ ಕೇಸ್ ಗಳಿಗೆ ಮೂಕ ಸಾಕ್ಷಿಯಾಗುತ್ತದೆ. ಕೊನೆಯಲ್ಲಿ ಕಿಟ್ಟುವಿಗೆ ಸಿಕ್ಕ ಕೆಂಪು ಹರಳಿನ ಸರ ಯಾರದ್ದು ? ಇದಕ್ಕೆ ಉತ್ತರ ಎರಡನೇ ಭಾಗದಲ್ಲಿದೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಎರಡನೇ ಭಾಗದಲ್ಲಿ ಲೇಖಕರು ಓದುಗರನ್ನು ಮಂಗಳೂರಿನ ಕಡಲಂಚಿಗೆ ತಂದು ನಿಲ್ಲಿಸುತ್ತಾರೆ. ಮಲೇಶಿಯಾದಿಂದ ಮಂಗಳೂರಿಗೆ ಬರುವ ಕ್ವೀನ್ 3 ಎಂಬ ಹೆಸರಿನ ಐಷಾರಾಮಿ ಹಡಗು , ಅದರಲ್ಲಿ ಪಯಣಿಸುತ್ತಿದ್ದ ಗಣೇಶ್ ರೈ ದಂಪತಿಗಳು , ಅವರ ಪಯಣದ ಉದ್ದೇಶ , ಜೊತೆಯಲ್ಲಿದ್ದ ಕೆಂಪು ಹರಳಿನ ಸರ, ಹಡಗಿನ ದಾರುಣ ಅಪಘಾತ, ಕತ್ತಲಲ್ಲಿ ನಡೆದ ಹಡಗಿನ ಲೂಟಿ - ಹೀಗೆ ಹಲವು ಘಟನಾವಳಿಗಳು ಜರುಗಿ, ಓದುಗರನ್ನು ಬಹುವಾಗಿ ಕಾಡುತ್ತವೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಮೂರನೇ ಭಾಗ , ಮೊದಲೆರಡು ಭಾಗಗಳ ಸಂಗಮ. ಕೆಂಪು ಹರಳಿನ ಸರ , ಅದು ಸೇರಬೇಕಾದ ಸ್ಥಳ ಸೇರುತ್ತದೆಯೇ? ಜೋಡ್ಪಾಲದಲ್ಲಿ ಘಟಿಸಿದ ಮಿಸ್ಸಿಂಗ್ ಕೇಸ್ ಗಳ, ಅಪಘಾತಗಳ ಹಿಂದಿನ ರೂವಾರಿ ಯಾರು? ಪಶ್ಚಿಮ ಘಟ್ಟದ ಕಾಡಿನ ಮಧ್ಯೆ ನೆಲೆಯೂರಿರುವ ಗುಂಪಿನ ಕೆಟ್ಟ ಉದ್ದೇಶವೇನು? ಕಿಟ್ಟು ಬಹುವಾಗಿ ಇಷ್ಟ ಪಟ್ಟಿದ್ದ, ತನ್ನದೇ ಅರಮನೆ ಎಂದು ಭಾವಿಸಿದ್ದ ರೋಡ್ ರೋಲರ್ ಭೀಮ ಕೊನೆಗೆ ಏನಾದ ? ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಕಥೆಯಲ್ಲಿ ಕೊನೆಯಲ್ಲಿ ನೀರವ ಮೌನ. ಅರ್ಧ ಮುಳುಗಿದ ಕ್ವೀನ್ 3, ಖಾಲಿಯಾದ ಮರಕಲರ ಹಳ್ಳಿ, ಜಾಗ ಬದಲಿಸಿದ ಭೀಮ, ಖಾಲಿಯಾದ ಜೋಡ್ಪಾಲ ! - ಒಟ್ಟಿನಲ್ಲಿ ಒಂದೇ ದಿನದಲ್ಲಿ ಓದಿಸಿಕೊಂಡು ನಿಟ್ಟುಸಿರು ಬಿಡುವಂತೆ ಮಾಡಿದೆ ಈ ಪುಸ್ತಕ. ನೀವು ಓದಿ, ಅಭಿಪ್ರಾಯ ತಿಳಿಸಿ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e- ಕಾರ್ತಿಕ್ ಕೃಷ್ಣ.\u003c\/span\u003e\u003cbr data-mce-fragment=\"1\"\u003e","brand":"Anush A. Shetty","offers":[{"title":"Default Title","offer_id":42086457704707,"sku":"HB00001057","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jodpaala_1.jpg?v=1637588658"},{"product_id":"kalbettada-darodekoraru-kannada-story-book","title":"ಕಳ್ಬೆಟ್ಟದ ದರೋಡೆಕೋರರು","description":"\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003eನಾಗರಹೊಳೆ ಅರಣ್ಯದ ಸಮೀಪವಿರುವ ಹನಗೋಡಿನ ಹಾಗೂ ಹುಣಸೂರಿನ ಸುತ್ತ ಮುತ್ತ ನಡೆಯುವ\/ಹೆಣದಿರುವ ಅದ್ಬುತ ಕಾದಂಬರಿ .\u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003eಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ನಿಗೂಢವಾದ ಭಯಾನಕ ಸ್ಥಳಪುರಾಣವನ್ನು ಹೊಂದಿರುವ, ಸಾಮಾನ್ಯರ ಪ್ರವೇಶಕ್ಕೆ ನಿಷೇಧ ಹೊಂದಿರುವ ಪ್ರದೇಶವೊಂದು ಇದ್ದೇ ಇರುತ್ತದೆ. ಊರ ಹಿರಿಯರೋ ಅಥವಾ ಅಗೋಚರ ಶಕ್ತಿಗಳ ಬಗ್ಗೆ ಅಲಂಕಾರಿಕವಾಗಿ ಮಾತನಾಡಬಲ್ಲ ವಾಕ್ಚಾತುರ್ಯ ಹೊಂದಿದವರೋ ಅಲ್ಲಿಯ ಐತಿಹ್ಯದ ಬಗ್ಗೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಸುತ್ತ ಅದರ ನಿಗೂಢತೆಯನ್ನು ಕಾಪಿಡುತ್ತಾರೆ. ಅಂಥದೊಂದು ಬೆಟ್ಟವೇ ಈ ಕಾದಂಬರಿಯಲ್ಲಿ ಬರುವ ಕಳ್ಬೆಟ್ಟ. ಅಲ್ಲಿ ಇರುವರೆಂಬ ದರೋಡೆಕೋರರ ಸುತ್ತಲೂ ಕಾದಂಬರಿ ಹೆಣೆಯಲ್ಪಟ್ಟಿದೆ.\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Anush. A. Shetty","offers":[{"title":"Default Title","offer_id":42086480183555,"sku":"HB00001056","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kalbettadadarodekoraru_1.jpg?v=1637589156"},{"product_id":"karnatakada-bhashegalu","title":"ಕರ್ನಾಟಕದ ಭಾಷೆಗಳು","description":"ಪ್ರಸ್ತುತ ಸಂಪುಟದಲ್ಲಿ ಕರ್ನಾಟಕದಲ್ಲಿ ಇರುವ ಭಾಷೆಗಳನ್ನೆಲ್ಲಾ ಅಧ್ಯಯನಕ್ಕೊಳಪಡಿಸಿ ದಾಖಲಿಸಲು ಪ್ರಯತ್ನಿಸಲಾಗಿದೆ. ಇದು ಭಾಷಿಕ ಅಂಶಗಳನ್ನು, ವ್ಯಾಕರಣದ ನಿಯಮಗಳನ್ನು ಜೊತೆಗೆ ಭಾಷಾ ಬಳಕೆಯನ್ನು ಒಳಗೊಂಡಿದೆ. ಕರ್ನಾಟಕದ ಹೊರಗಿನ ಭಾರತೀಯರಿಗಾಗಿ ಈ ಸಂಪುಟದ ಹಿಂದಿ ಅವರತಣಿಕೆಯನ್ನು (ಸಂಪುಟ ೧೪, ಭಾಗ ೧) ಎಂದೂ, ಅಂತರಾಷ್ಟ್ರೀಯ ಓದುಗರಿಗಾಗಿ ಆಂಗ್ಲ ಅವರತಣಿಕೆಯನ್ನು (ಸಂಪುಟ ೧೪, ಭಾಗ ೨) ಎಂದೂ ಹೊರತರಲಾಗಿದೆ. ಸುಮಾರು ಇಪ್ಪತ್ತು ಸಾವಿರ ಪುಟಗಳ ಮೂರೂ ಭಾಷೆಗಳಲ್ಲಿಯ ಈ ಸಂಪುಟ ಕರ್ನಾಟಕದ ಭಾಷೆಗಳ ೧೪ನೆಯ ಸಂಪುಟವಾಗಿದೆ. ಇಷ್ಟು ವಿಸ್ತೃತವಾಗಿ ಹಾಗೂ ಇಷ್ಟು ಆಳವಾಗಿ ಈ ವಿಷಯಗಳ ಅಧ್ಯಯನ ಮತ್ತು ದಾಖಲಾತಿ ಕರ್ನಾಟಕದ ಭಾಷೆಗಳ ಬಗ್ಗೆ ಆಗುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲ ಸಲ.","brand":"G. N. Devi, Rajeshwari Maheshwaraiah, H. M. Maheshwariah","offers":[{"title":"Default Title","offer_id":42095759884547,"sku":"HB00000997","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-24at11.19.54AM.jpg?v=1637733654"},{"product_id":"shree-mahabharata-sheshagiri-rao","title":"ಶ್ರೀ ಮಹಾಭಾರತ (ನಾಲ್ಕು ಸಂಪುಟಗಳು)","description":"ಸಾಮಾನ್ಯವಾಗಿ ಲಭ್ಯವಾಗದ 'ಶಾಂತಿ ಪರ್ವ' ಮತ್ತು 'ಅನುಶಾಸನ ಪರ್ವ'ಗಳು ಸಂಪೂರ್ಣವಾಗಿ ನಿರೂಪಣೆಗೊಂಡಿರುವುದು ಒಂದು ವೈಶಿಷ್ಟ್ಯ.\u003cbr data-mce-fragment=\"1\"\u003e\u003cbr data-mce-fragment=\"1\"\u003e ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ನಲ್ಲಿ ಬರೆದು ಸ್ವತಃ ಕನ್ನಡಕ್ಕೆ ಅನುವಾದಿಸಿರುವ 'ಶ್ರೀ ಮಹಾಭಾರತ – ಒಂದು ಪಕ್ಷಿನೋಟ' ಕೃತಿಯನ್ನು ಸುಮಾರು ನೂರು ಪುಟಗಳಲ್ಲಿ ಸಂಕ್ಷೇಪಿಸಿ ಪ್ರಸ್ತುತ ಕೃತಿಯಲ್ಲಿ ಸೇರಿಸಲಾಗಿದ್ದು ಇದು ಮಹಾಭಾರತದ ಪ್ರವೇಶಕ್ಕೆ ಕೈಮರದಂತಿದೆ.","brand":"Sri G. S. Rangnath Rao","offers":[{"title":"Default Title","offer_id":42107772862723,"sku":"HB00000889","price":1600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_10.jpg?v=1637912973"}],"url":"https:\/\/harivubooks.com\/collections\/buy-4-get-1-free.oembed?page=7","provider":"Harivu Books","version":"1.0","type":"link"}